Select Your Language

Notifications

webdunia
webdunia
webdunia
webdunia

ತುಮಕೂರು: ಜೀವವಿತ್ತವಳ ಜೀವ ತೆಗೆದ ಪಾಪಿ ಪುತ್ರ

ತುಮಕೂರು: ಜೀವವಿತ್ತವಳ ಜೀವ ತೆಗೆದ ಪಾಪಿ ಪುತ್ರ
ತುಮಕೂರು , ಮಂಗಳವಾರ, 5 ಆಗಸ್ಟ್ 2014 (09:24 IST)
ಕೆಟ್ಟ ಮಗ ಹುಟ್ಟಬಹುದು. ಆದರೆ ಕೆಟ್ಟ ತಾಯಿ ಹುಟ್ಟಲಾರರು ಎಂದು ಹೇಳಲಾಗುತ್ತದೆ. 9 ತಿಂಗಳು ಹೊತ್ತು, ಸಹಿಸಲಾಗದ ನೋವನ್ನನುಭವಿಸಿ ಹೆತ್ತು, ತಾ ಹಡೆದ ಕಂದಮ್ಮನಿಗಾಗಿ ಸರ್ವವನ್ನು ತ್ಯಾಗ ಮಾಡುವ ತಾಯಿ ನಿಸ್ವಾರ್ಥ ಮಮತೆಯ ಗಣಿ. ಆಕೆಗಾಗಿ  ನಾವೆಷ್ಟು ಮಾಡಿದರೂ ಕಡಿಮೆಯೇ.... ಅದರೆ ಆಧುನಿಕ ಕಾಲದಲ್ಲಿ ಎಲ್ಲ ಸಂಬಂಧಗಳು ಅರ್ಥಹೀನ ಎನ್ನಿಸುತ್ತಿದ್ದು, ಅದು ತಾಯಿ- ಮಗನಂತಹ  ಪವಿತ್ರ ಸಂಬಂಧಕ್ಕೂ ಕಪ್ಪುಚುಕ್ಕೆ ತರುತ್ತಿದೆ ಎಂಬುದು ವಿಷಾದನೀಯ.

ಇದಕ್ಕೆ ಸಾಕ್ಷಿ ಎಂಬಂತೆ ಕಳೆದ ಸೋನವಾರ ತುಮಕೂರಿನಲ್ಲಿ ಭಯಾನಕ ಘಟನೆಯೊಂದು ನಡೆದಿದ್ದು, ತನ್ನ ತಾಯಿಯ ನಡವಳಿಕೆಯನ್ನು ಶಂಕಿಸಿ, ಕೇವಲ 16 ವರ್ಷದ ಬಾಲಕನೊಬ್ಬ ತಾಯಿಯ ಕತ್ತುಕೊಯ್ದು ಕೊಲೆ ಮಾಡಿದ್ದಾನೆ. 
 
ತುಮಕೂರಿನ ನೃಪತುಂಗ ಬಡಾವಣೆಯ ನಿವಾಸಿ 35 ವರ್ಷದ ಪುಷ್ಪಾವತಿ ಎಂಬಾಕೆಯೇ ಹೆತ್ತ ಮಗನಿಂದ ಕೊಲೆಗೀಡಾದ ದೌರ್ಭಾಗ್ಯಶಾಲಿ ತಾಯಿಯಾಗಿದ್ದು, ಹೊಸ ಬಡಾವಣೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 
 
ಕೊಲೆಗಾರ ಮಗನನ್ನು ಬಂಧಿಸಿರುವ ಪೋಲಿಸರು ತನಿಖೆಯನ್ನು ಮುಂದುವರೆಸಿದ್ದಾರೆ. 

Share this Story:

Follow Webdunia kannada