Select Your Language

Notifications

webdunia
webdunia
webdunia
webdunia

ಪುತ್ರನ ಪ್ರೇಮ ಪುರಾಣದ ಬಗ್ಗೆ ಪ್ರಧಾನಿ ವಿವರಣೆ ಕೇಳಿಲ್ಲ: ಡಿವಿಎಸ್

ಪುತ್ರನ ಪ್ರೇಮ ಪುರಾಣದ ಬಗ್ಗೆ ಪ್ರಧಾನಿ ವಿವರಣೆ ಕೇಳಿಲ್ಲ: ಡಿವಿಎಸ್
ಬೆಂಗಳೂರು , ಸೋಮವಾರ, 1 ಸೆಪ್ಟಂಬರ್ 2014 (18:42 IST)
ಪುತ್ರ ಕಾರ್ತಿಕ್‌ಗೌಡ ವಿರುದ್ಧದ ವಂಚನೆ, ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಯಾವುದೇ ವರದಿ ಕೇಳಿಲ್ಲ ಎಂದು ಕೇಂದ್ರ ರೇಲ್ವೆ ಸಚಿವ ಸದಾನಂದಗೌಡ ಅವರು ಸ್ಪಷ್ಟಪಡಿಸಿದ್ದಾರೆ.
 
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಸದಾನಂದಗೌಡ ಅವರು, ಕಾರ್ತಿಕ್ ಗೌಡ- ಮೈತ್ರಿಯಾ ಗೌಡ ಮದುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯುತ್ತಿದೆ. ಈ ಕುರಿತು ವಿಮರ್ಶೆ ಮಾಡುವುದು ಸರಿಯಲ್ಲ. ಕಾನೂನು ಎಲ್ಲರಿಗೂ ಒಂದೇ ಎಂದು ಹೇಳಿದ್ದಾರೆ.
 
ಪ್ರಕರಣ ಬೆಳಕಿಗೆ ಬಂದ ಮರುದಿನದಿಂದ ನನ್ನ ಕೆಲಸದಲ್ಲಿ ನಿರತನಾಗಿದ್ದೇನೆ ನನ್ನ ಕೆಲಸಕ್ಕೆ ತೊಂದರೆ ಮಾಡಲ್ಲ ಎಂದ ಅವರು, ಅಮಿತ್ ಶಾ ಹಾಗೂ ಪ್ರಧಾನಿ ಈ ವಿಚಾರವಾಗಿ ನನ್ನ ಜತೆ ಚರ್ಚೆ ಮಾಡಿಲ್ಲ ಎಂದರು. ಕಾನೂನಿನ ಪ್ರಕಾರ ತನಿಖೆ ನಡೆಯುತ್ತಿದ್ದು, ಸತ್ಯಾಸತ್ಯತೆ ಹೊರಬರಲಿ ಎಂದರು.

Share this Story:

Follow Webdunia kannada