Webdunia - Bharat's app for daily news and videos

Install App

ಕಲ್ಲಪ್ಪ ಹಂಡಿಭಾಗ್ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆಯಾಗಲಿ: ಪೋಷಕರು

Webdunia
ಶನಿವಾರ, 27 ಆಗಸ್ಟ್ 2016 (18:16 IST)
ನನ್ನ ಮಗ ನಿರಪರಾಧಿ. ಆತ ಯಾರ ಮನಸ್ಸನ್ನು ನೋಯಿಸದಂತಹ ವ್ಯಕ್ತತ್ವ ಹೊಂದಿದ್ದು, ಅವನಿಗೆ ಮೋಸವಾಗಿದೆ. ಅವನದಲ್ಲದ ತಪ್ಪಿಗೆ ನಾವು ಅವನನ್ನು ಕಳೆದುಕೊಂಡಿದ್ದೇವೆ ಎಂದು ಮೃತ ಡಿವೈಎಸ್‌ಪಿ ಕಲ್ಲಪ್ಪ ಹಂಡಿಭಾಗ್ ಅವರ ಪೋಷಕರು ಮಾಧ್ಯಮದ ಮುಂದೆ ಅಳಲು ತೊಡಿಕೊಂಡಿದ್ದಾರೆ.
 
ಮಗನ ಸಾವಿನ ಸುದ್ದಿಯಿಂದ ಇನ್ನೂ ಹೊರ ಬರದ ಕಲ್ಲಪ್ಪ ಹಂಡಿಭಾಗ ಪೋಷಕರು, ಮಗ ಸತ್ತ ಮೇಲೆ ಊರಿನ ಜನತೆ, ಸರಕಾರ ಹಾಗೂ ಸಂಘ ಸಂಸ್ಥೆಗಳು ಧೈರ್ಯ ತುಂಬಿ ಆರ್ಥಿಕ ನೆರವು ನೀಡಿವೆ. ಆದರೆ, ನನ್ನ ಮಗ ಯಾವುದೇ ತಪ್ಪು ಮಾಡಿಲ್ಲ. ಆತ ನಿರಪರಾಧಿ ಎಂದು ಕಲ್ಲಪ್ಪನ ಪೋಷಕರು ಕಣ್ಣೀರಿಟ್ಟರು. 
 
ಬೆಳಗಾವಿ ನಗರದ ಪ್ರವಾಸಿ ಮಂದಿರದಲ್ಲಿ ಹಿಂದುಳಿದ ವರ್ಗದ ಸರಕಾರಿ ಅಧಿಕಾರಿಗಳ ಸಂಘ, ಕಲ್ಲಪ್ಪ ಹಂಡಿಭಾಗ್ ಕುಟುಂಬಕ್ಕೆ 3 ಲಕ್ಷ ರೂಪಾಯಿ ಧನ ಸಹಾಯ ಮಾಡಿತು. ಈ ವೇಳೆ, ಸಂಘದ ಪದಾಧಿಕಾರಿಗಳ ಮುಂದೆ ಕಲ್ಲಪ್ಪನ ಪೋಷಕರು ಕಷ್ಟದಲ್ಲಿ ತಮ್ಮ ಮಗ ಬೆಳೆದು ಬಂದಿದ್ದ ದಾರಿಯನ್ನು ಹಾಗೂ ಸರಕಾರ ನೀಡಿರುವ ಭರವಸೆಗಳ ಕುರಿತು ತಿಳಿಸಿದರು.
 
ತಮ್ಮ ಮಗ ಕಲ್ಲಪ್ಪ ಹಂಡಿಭಾಗ್ ಸಾವಿಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ನೀಡಲಿ ಎಂದು ಒತ್ತಾಯಿಸಿದ ಕಲ್ಲಪ್ಪ ಪೋಷಕರು, ತಮಗೆ ಆರ್ಥಿಕ ನೆರವು ನೀಡಿರುವ ಎಲ್ಲರಿಗೂ ಕೈ ಮುಗಿದು ಕೃತಜ್ಞತೆ ಸಲ್ಲಿಸಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments