Webdunia - Bharat's app for daily news and videos

Install App

ಬಿಜೆಪಿಯಲ್ಲೇ ಉಳಿಯುವ ಸುಳಿವು ಕೊಟ್ಟ ಸೋಮಣ್ಣ

geetha
ಮಂಗಳವಾರ, 16 ಜನವರಿ 2024 (17:23 IST)
ಬೆಂಗಳೂರು :ನನಗೆ 73 ವರ್ಷ. ಈಗಲೂ ಆರೋಗ್ಯವಾಗಿದ್ದೇನೆ.ಯಾವುದಾದ್ರೂ ಮೂರು ಲೋಕಸಭಾ ಕ್ಷೇತ್ರಕೊಡಿ ಗೆಲ್ಲಿಸಿಕೊಂಡು ಬರ್ತೀನಿ ಅಂದೆ ಎಂದು ಹೇಳಿರುವ ಸೋಮಣ್ಣ,  ಮಗನಿಗೆ ಏನೂ ಕೇಳಿಲ್ಲ.ಈ ಕ್ಷೇತ್ರದಲ್ಲಿ ನನ್ನದೇ ಆದ ಕೊಡುಗೆ ಇದೆ.  ಅನೇಕ ಸಮುದಾಯಕ್ಕೆ ಸಹಾಯ ಮಾಡಿದ್ದೇನೆ ಎಂದರು.
 
ಅನಂತ್ ಕುಮಾರ್ ಹೆಗಡೆ ಹೇಳಿಕೆ ವಿಚಾರವಾಗಿ ಪ್ರತಿಕ್ರಿಸಿದ ವಿ. ಸೋಮಣ್ಣ, ಅವರನ್ನು ತುಂಬಾ ಹತ್ತಿರದಿಂದ ನೋಡಿದೆ.ಅವರು ತುಂಬಾ ಒಳ್ಳೆಯ ವ್ಯಕ್ತಿ  ಮಾತನಾಡುವಾಗ ಹೇಳಿಕೆ ಹೇಗೆಂದ್ರೆ ಹಾಗೆ ಕೊಡಬಾರದು ಎಂದರು.

ಪಕ್ಷದಲ್ಲಿ ತಮ್ಮನ್ನು ಕಡೆಗಣಿಸಲಾಗುತ್ತಿದೆ ಎಂದು ಕಾಂಗ್ರೆಸ್‌  ಪಕ್ಷದ ಕದ ತಟ್ಟಲು ಸಿದ್ದವಾಗಿದ್ದ ಮಾಜಿ ಸಚಿವ ವಿ. ಸೋಮಣ್ಣ  ಬಿಜೆಪಿ ವರಿಷ್ಠರನ್ನು  ಭೇಟಿಯಾಗಿ ಬಂದ ಬಳಿಕ ಸೋಮವಾರ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ್ದಾರೆ. ದೇಶಕ್ಕೆ ಮೋದಿಯ ಅಗತ್ಯವಿದೆ. ನೀವು ಪಕ್ಷದಲ್ಲಿಯೇ ಇರಬೇಕೆಂದು ವರಿಷ್ಠರು ಮನವಿ ಮಾಡಿರುವುದಾಗಿ ಹೇಳಿರುವ ವಿ. ಸೋಮಣ್ಣ ತಾವು ಬಿಜೆಪಿಯಲ್ಲಿಯೆ ರಾಜಕೀಯ ಮುಂದುವರೆಸುವ ಸುಳಿವು ನೀಡಿದ್ದಾರೆ.
 
ಜೆ.ಪಿ .ನಡ್ಡಾ ಜಿ  ಹಾಗೂ ಅಮಿತ್ ಶಾ  ಭೇಟಿ ರನ್ನು ಭೇಟಿಯಾಗಿ ಅವರ ಅಂತರಾಳದ ಮಾತು ಕೇಳಿದೆ.  ರಾಷ್ಟ್ರಕ್ಕೆ ಮೋದಿ ಅವರ ಅವಶ್ಯಕತೆ ಇದೆ.ಕೆಲಸ ಮಾಡಿ ಮುಂದೆ ತೀರ್ಮಾನ ಮಾಡ್ತೀವಿ ಎಂದು ವರಿಷ್ಠರು ಹೇಳಿದ್ದಾಗಿ ಸೋಮಣ್ಣ ತಿಳಿಸಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments