Select Your Language

Notifications

webdunia
webdunia
webdunia
webdunia

ಸ್ಕೂಟರ್‌ನಲ್ಲಿ ಅಡಗಿತ್ತೊಂದು ನಾಗರಹಾವು

ಸ್ಕೂಟರ್‌ನಲ್ಲಿ ಅಡಗಿತ್ತೊಂದು  ನಾಗರಹಾವು
ಮೈಸೂರು , ಗುರುವಾರ, 5 ಮಾರ್ಚ್ 2015 (11:18 IST)
ಮೈಸೂರಿನ ಗಾಂಧಿ ನಗರದಲ್ಲಿ ದೀಪು ಎಂಬವರು ತಮ್ಮ ಸ್ಕೂಟರಿನ ಚಾಲನೆಗೆ ಪ್ರಯತ್ನಿಸುವಾಗ ಡಿಕ್ಕಿಯತ್ತ ಕಣ್ಣು ಹಾಯಿಸಿದರು.  ಆದರೆ ಡಿಕ್ಕಿಯಲ್ಲಿ ಸುಖವಾಗಿ ಮಲಗಿದ್ದ ನಾಗರಹಾವನ್ನು ಕಂಡು ಬೆಚ್ಚಿಬಿದ್ದರು. ಕೂಡಲೇ ಉರಗ ತಜ್ಞ ಸೈಯದ್ ಎಂಬವರನ್ನು ಕರೆಸಲಾಯಿತು.

ಅವರು ಸುಮಾರು 20 ನಿಮಿಷಗಳ ಪ್ರಯತ್ನದಿಂದ ಬರೀ ಕೈನಲ್ಲಿ ಹಾವಿನ ತಲೆಯನ್ನು ಹಿಡಿದು ಡಿಕ್ಕಿಯಿಂದ ಹೊರಕ್ಕೆ ತೆಗೆದರು. ಸೈಯದ್ ಹಾವನ್ನು ಹಿಡಿಯುತ್ತಿದ್ದಾಗ ನೆರೆದಿದ್ದ ಜನರಲ್ಲಿ  ಆತಂಕದ ಅಲೆ  ಸೃಷ್ಟಿಸಿತ್ತು. ನಂತರ ಸೈಯದ್ ಆ ಹಾವನ್ನು ಚಾಮುಂಡಿ ಬೆಟ್ಟದ ತಪ್ಪಲಲ್ಲಿ ಬಿಟ್ಟರು.

. ಸಾರ್ವಜನಿಕರ ಕಣ್ಣಿಂದ ಮರೆಯಾಗಿ ಬೆಚ್ಚನೆಯ ಜಾಗವನ್ನು ಅರಸುತ್ತಿದ್ದ ಹಾವು ಸ್ಕೂಟರಿನ ತೆರೆದುಕೊಂಡಿದ್ದ ಡಿಕ್ಕಿಯೊಳಗೆ ಅಡಗಿ ಕುಳಿತಿತ್ತು. 

Share this Story:

Follow Webdunia kannada