Select Your Language

Notifications

webdunia
webdunia
webdunia
webdunia

ಕಾಂಗ್ರೆಸ್ ಸಭೆಗೆ ಹಾಜರಾಗದೆ ಮೌನ ಮುರಿದ ಎಸ್ಎಂಕೆ

ಕಾಂಗ್ರೆಸ್ ಸಭೆಗೆ ಹಾಜರಾಗದೆ ಮೌನ ಮುರಿದ ಎಸ್ಎಂಕೆ
ಬೆಂಗಳೂರು , ಶನಿವಾರ, 1 ಆಗಸ್ಟ್ 2015 (17:07 IST)
ಬಿಬಿಎಂಪಿ ಚುನಾವಣೆಯನ್ನು ನಡೆಸಲು ದಿನಗಣನೆ ಆರಂಭವಾಗಿರುವ ಹಿನ್ನೆಯಲ್ಲಿ  ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಸಭೆ ನಡೆದಿದ್ದು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು ಗೈರು ಹಾಜರಾಗಿದ್ದಾರೆ. 
 
ರೇಸ್‌ಕೋರ್ಸ್ ರಸ್ತೆಯಲ್ಲಿನ ಕಾಂಗ್ರೆಸ್ ಕಚೇರಿಯಲ್ಲಿ ಈ ಸಭೆ ನಡೆದಿದ್ದು, ಬಿಬಿಎಂಪಿ ಚುನಾವಣೆಗೆ ಯಾವ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕು ಎಂಬ ಬಗ್ಗೆ ಚರ್ಚಿಸಲಾಗಿದೆಎಂದು ತಿಲಿದು ಬಂದಿದೆ. 
 
ಸಭೆಯಲ್ಲಿ ಪಕ್ಷದ ಮತ್ತೋರ್ವ ಮಾಜಿ ಮುಖ್ಯಮಂತ್ರಿ ಧರಮ್ ಸಿಂಗ್, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಬೆಂಗಳೂರು ನಗರದ ಕಾಂಗ್ರೆಸ್ ಮುಖಂಡರು ಹಾಗೂ ಉಸ್ತುವಾರಿ ಸಚಿವರು ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು. 
 
ಇನ್ನು ಎಲ್ಲಾ ನಾಯಕರಿಗೆ ನೀಡಿದಂತೆ ಸ್ವತಋ ಕೆಪಿಸಿಸಿ ಅಧ್ಯಕ್ಷರೇ ಕೃಷ್ಣ ಅವರಿಗೆ ಆಹ್ವಾನ ನೀಡಿದ್ದರು. ಎನ್ನಲಾಗಿದೆ. ಆದರೆ ಕೃಷ್ಣ ಅವರು ಸಭೆಗೆ ಹಾಜರಾಗದೆ ತಮ್ಮ ಪಕ್ಷದ ಸದಸ್ಯರೊಂದಿಗೆ ಇರುವ ವೈಮನಸ್ಸನ್ನು ಮೌನದ ಮೂಲಕ ಸಾಬೀತುಪಡಿಸಿದ್ದಾರೆ. 

Share this Story:

Follow Webdunia kannada