SM Krishna: ಎಸ್ಎಂ ಕೃಷ್ಣ ಚಿತೆಗೆ ಅಗ್ನಿಸ್ಪರ್ಶ ಮಾಡುವವರು ಇವರೇ ನೋಡಿ

Krishnaveni K
ಬುಧವಾರ, 11 ಡಿಸೆಂಬರ್ 2024 (09:05 IST)
ಬೆಂಗಳೂರು: ಮೊನ್ನೆ ತಡರಾತ್ರಿ ಅಗಲಿದ ಮಾಜಿ ಮುಖ್ಯಮಂತ್ರಿ, ಮಾಜಿ ವಿದೇಶಾಂಗ ಸಚಿವ ಎಸ್ಎಂ ಕೃಷ್ಣ ಅವರ ಅಂತ್ಯಕ್ರಿಯೆ ಇಂದು ಸಕಲ ಸರ್ಕಾರೀ ಗೌರವಗಳೊಂದಿಗೆ ನೆರವೇರಲಿದೆ. ಅವರ ಚಿತೆಗೆ ಬೆಂಕಿ ಇಟ್ಟು ಅಂತಿಮ ವಿಧಿ ವಿಧಾನ ಮಾಡುವವರು ಯಾರು ಎಂದು ಈಗಾಗಲೇ ನಿರ್ಧಾರವಾಗಿದೆ.

ಎಸ್ಎಂ ಕೃಷ್ಣ ಅವರಿಗೆ ಗಂಡು ಮಕ್ಕಳಿಲ್ಲ. ಮಾಳವಿಕಾ ಮತ್ತು ಶಾಂಭವಿ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಹಿರಿಯ ಪುತ್ರಿ ಮಾಳವಿಕಾ ಉದ್ಯಮಿ, ದಿವಂಗತ ಸಿದ್ಧಾರ್ಥ್ ಹೆಗ್ಡೆ ಪತ್ನಿ. ಸಿದ್ಧಾರ್ಥ್ ಹೆಗ್ಡೆ ಆತ್ಮಹತ್ಯೆ ಮಾಡಿಕೊಂಡು ತೀರಿಕೊಂಡಾಗ ಎಸ್ಎಂ ಕೃಷ್ಣ ತೀರಾ ಕುಗ್ಗಿ ಹೋಗಿದ್ದರು.

ಹಿರಿಯ ಪುತ್ರಿ ಮಾಳವಿಕಾ ಪುತ್ರ ಅಮರ್ಥ್ಯ ಹೆಗ್ಡೆ. ಹಾಲಿ ಡಿಸಿಎಂ ಡಿಕೆ ಶಿವಕುಮಾರ್ ಮಗಳು ಐಶ್ವರ್ಯಾ ಪತಿಯೇ ಅಮರ್ಥ್ಯ ಹೆಗ್ಡೆ. ಈಗ ಎಸ್ಎಂ ಕೃಷ್ಣ ಅಂತಿಮ ವಿಧಿ ವಿಧಾನವನ್ನು ಮೊಮ್ಮಗ ಅಮರ್ಥ್ಯನೇ ಮಾಡಲಿದ್ದಾರೆ ಎಂದು ಹೇಳಲಾಗಿದೆ. ಗಂಡು ಮಗನ ಸ್ಥಾನದಲ್ಲಿ ನಿಂತು ಅಮರ್ಥ್ಯನೇ ತಾತನ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲಿದ್ದಾರಂತೆ.

ಇಂದು ಮದ್ದೂರು ತಾಲೂಕಿನ ಎಸ್ಎಂ ಕೃಷ್ಣ ಹುಟ್ಟೂರು ಸೋಮನಹಳ್ಳಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ. ಇದರ ಸಂಪೂರ್ಣ ಉಸ್ತುವಾರಿಯನ್ನು ಡಿಸಿಎಂ ಡಿಕೆ ಶಿವಕುಮಾರ್ ವಹಿಸಿಕೊಂಡಿದ್ದಾರೆ. ಡಿಕೆ ಶಿವಕುಮಾರ್ ಗೆ ಎಸ್ಎಂ ಕೃಷ್ಣ ರಾಜಕೀಯ ಗುರು ಕೂಡಾ. ಹೀಗಾಗಿ ಅವರನ್ನು ಗೌರವಯುತವಾಗಿ ಕಳುಹಿಸಿಕೊಡುವ ಹೊಣೆಯನ್ನು ಅವರೇ ಹೊತ್ತುಕೊಂಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೇಕೆದಾಟು ಯೋಜನೆ ಕುರಿತು ಪ್ರಧಾನಿ ನರೇಂದ್ರ ಮೋದಿಗೆ ತಮಿಳು ಸಿಎಂ ವಿಜಯ್ ಜೋಸೆಫ್ ಪತ್ರ

ಧರ್ಮೇಂದ್ರ ಪ್ರಧಾನ್‌ಗೆ ಸ್ವಾಗತ ನೀಡಿರುವುದು ನಾಚಿಕೆಗೇಡು: ಪ್ರಿಯಾಂಕಾ ಗಾಂಧಿ ಕಿಡಿ

ರಾಜ್ಯದ ಈ ಭಾಗದಲ್ಲಿ ಜುಲೈ 30ರ ವರೆಗೆ ಭಾರೀ ಮಳೆ, ಇಲ್ಲಿದೆ ಮಾಹಿತಿ

ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದ್ದ ಶಿಕ್ಷಕರೇ ಮಾದಕ ಜಾಲದ ಡಾನ್‌ಗಳು, ಕೇರಳದಲ್ಲಿ ಬೆಚ್ಚಿಬೀಳಿಸುವ ಘಟನೆ

ಭಾರತವನ್ನು ನೇಪಾಳದಂತೆ ಮಾಡುತ್ತೇವೆ, ಪಾರ್ಲಿಮೆಂಟ್ ಕಿತ್ತಾಕ್ತೇವೆ ಎಂದಿದ್ದ ವ್ಯಕ್ತಿ ಜೊತೆ ಅಭಿಜಿತ್ ದಿಪ್ಕೆ ಸಂಭ್ರಮಾಚರಣೆ Video

ಮುಂದಿನ ಸುದ್ದಿ
Show comments