Select Your Language

Notifications

webdunia
webdunia
webdunia
webdunia

ಜಾರಕಿಹೋಳಿ ರಾಜೀನಾಮೆಯಿಂದ ಸಿದ್ದು ಸರ್ಕಾರದ ಅವಸಾನ ಆರಂಭ: ಜೋಷಿ

ಜಾರಕಿಹೋಳಿ ರಾಜೀನಾಮೆಯಿಂದ ಸಿದ್ದು ಸರ್ಕಾರದ ಅವಸಾನ ಆರಂಭ: ಜೋಷಿ
ಬೆಂಗಳೂರು , ಬುಧವಾರ, 28 ಜನವರಿ 2015 (12:12 IST)
ಅಬಕಾರಿ ಸಚಿವ ಸತೀಶ್ ಜಾರಕಿಹೋಳಿ ಅವರು ನಿನ್ನೆ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಹಿನ್ನೆಲೆಯಲ್ಲಿ ಬಿಜೆಪಿಯ ರಾಜ್ಯ ಘಟಕದ ಅಧ್ಯಕ್ಷ ಪ್ರಹ್ಲಾದ ಜೋಷಿ ಅವರು ಪ್ರತಿಕ್ರಿಯಿಸಿದ್ದು, ಇದು ಸಿದ್ದು ಸರ್ಕಾರದ ಅವಸಾನ ಆರಂಭವಾಗಿದೆ ಎನ್ನುವ ಮೂಲಕ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ವ್ಯಂಗ್ಯವಾಡಿದ್ದಾರೆ. 
 
ಜಾರಕಿಹೋಳಿ ಅವರ ರಾಜೀನಾಮೆಗೆ ಸಂಬಂಧಿಸಿದಂತೆ ನಿಮ್ಮ ಅಭಿಪ್ರಾಯವೇನು ಎಂದು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅವಸಾನ ಆರಂಭವಾಗಿದೆ. ಇದೇ ದಿವಾಳಿ ತಂಡದ ಪರಮಾವಧಿಯಾಗಿದ್ದು, ಸಂಪುಟದ ಇನ್ನಷ್ಟು ಮಂದಿ ಸಚಿವರು ಸಂಪುಟದಿಂದ ಖಾಲಿಯಾಗುವ ಮಾಹಿತಿ ಇದೆ ಎಂದರು. 
 
ಅಬಕಾರಿ ಇಲಾಖಾ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸತೀಶ್ ಜಾರಕಿಹೋಳಿ, ನಿನ್ನೆ ಫ್ಯಾಕ್ಸ್ ಮೂಲಕ ಸಿಎಂ ಸಿದ್ದರಾಮಯ್ಯ ಹಾಗೂ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು. 

Share this Story:

Follow Webdunia kannada