Select Your Language

Notifications

webdunia
webdunia
webdunia
webdunia

ಸಿದ್ರಾಮಯ್ಯನವ್ರೆ ಜನ ನಿಮ್ಮನ್ನ ಬೆಂಗಳೂರು ಒಡೆದ ಮನೆ ಮುರಕ ಎಂದು ತೆಗಳ್ತಾರೆ: ಆರ್.ಅಶೋಕ್

ಸಿದ್ರಾಮಯ್ಯನವ್ರೆ ಜನ ನಿಮ್ಮನ್ನ ಬೆಂಗಳೂರು ಒಡೆದ ಮನೆ ಮುರಕ ಎಂದು ತೆಗಳ್ತಾರೆ: ಆರ್.ಅಶೋಕ್
ಬೆಂಗಳೂರು , ಶುಕ್ರವಾರ, 17 ಏಪ್ರಿಲ್ 2015 (16:53 IST)
ಬೆಂಗಳೂರು ನಾಡು ಕಟ್ಟಲು ಕೆಂಪೇಗೌಡರ ಸೊಸೆ ಬಲಿದಾನ ನೀಡಿದ್ದಾಳೆ. ಅಂತಹ ಬೆಂಗಳೂರನ್ನು ಒಡೆಯುವ ಕಾರ್ಯಕ್ಕೆ ಕೈ ಹಾಕಬೇಡಿ ಎಂದು ಬಿಜೆಪಿ ಮುಖಂಡ ಮಾಜಿ ಸಚಿವ ಆರ್ ಅಶೋಕ್ ಸಲಹೆ ನೀಡಿದ್ದಾರೆ.

ಬಿಬಿಎಂಪಿಯನ್ನು ವಿಭಜಿಸಿ ಮೂರು ವಿಭಾಗಗಳಾಗಿ ವಿಂಗಡಿಸುವ ಸರಕಾರದ ಕಾರ್ಯವೈಖರಿಯಿಂದ ಅಖಂಡ ಬೆಂಗಳೂರಿಗೆ ಧಕ್ಕೆ ಬರಲಿದೆ.ಸಿದ್ರಾಮಯ್ಯನವ್ರೆ ಜನ ನಿಮ್ಮನ್ನ ಬೆಂಗಳೂರು ಒಡೆದ ಮನೆ ಮುರಕ ಎಂದು ತೆಗಳ್ತಾರೆ. ಆದ್ದರಿಂದ ಬಿಬಿಎಂಪಿ ವಿಭಜನೆ ಕೈಬಿಡಿ ಎಂದು ಒತ್ತಾಯಿಸಿದ್ದಾರೆ.

ಬಿಬಿಎಂಪಿ ವಿಭಜನೆಯನ್ನು ಬಿಟ್ಟು ಅಕಾಲಿಕ ಮಳೆಯಿಂದಾದ ಅನಾಹುತದ ಬಗ್ಗೆ ಚರ್ಚಿಸೋಣ. ಬಿಬಿಎಂಪಿ ವಿಭಜನೆಗೆ ಸಿಎಂ ಕಾರಣ. ಬೆಂಗಳೂರು ಅಭಿವೃದ್ಧಿಯಾಗದಿದ್ರೆ ಅದಕ್ಕೆ ಸಿಎಂ ಕಾರಣ ಎಂದು ನೇರವಾಗಿ ಆರೋಪಿಸಿದರು.  

ವಿಧಾನಸಭೆ ಅಧಿವೇಶನದಲ್ಲಿ ಅಕಾಲಿಕ ಮಳೆಯ ಬಗ್ಗೆ ಚರ್ಚೆ ನಡೆಸಿದಲ್ಲಿ ನೀವು ಜನರ ಮುಂದೆ ಹಿರೋ ಆಗ್ತಿರಿ,ಬಿಬಿಎಂಪಿ ವಿಭಜನೆಯ ಬಗ್ಗೆ ಚರ್ಚಿಸಿದಲ್ಲಿ ವಿಲನ್ ಆಗ್ತಿರಿ ಎಂದು ಮಾಜಿ ಸಾರಿಗೆ ಸಚಿವ ಆರ್.ಅಶೋಕ್ ಕಿಡಿಕಾರಿದ್ದಾರೆ.

Share this Story:

Follow Webdunia kannada