Select Your Language

Notifications

webdunia
webdunia
webdunia
webdunia

ಸೆ.10ಕ್ಕೆ ದೆಹಲಿಯಲ್ಲಿ ಸಿದ್ದು ರೋಡ್ ಶೋ-ಸಂವಾದ ?!

ಸೆ.10ಕ್ಕೆ ದೆಹಲಿಯಲ್ಲಿ ಸಿದ್ದು ರೋಡ್ ಶೋ-ಸಂವಾದ ?!
ಬೆಂಗಳೂರು , ಗುರುವಾರ, 3 ಸೆಪ್ಟಂಬರ್ 2015 (11:53 IST)
ತಮ್ಮ ತಮ್ಮ ಪ್ರದೇಶಗಳತ್ತ ಕೈಗಾರಿಕೋದ್ಯಮಿಗಳನ್ನು ಸೆಳೆಯಲು ಕೇಂದ್ರ ಸರ್ಕಾರವು ಯೋಜನೆಯೊಂದನ್ನು ರೂಪಿಸಿದ್ದು, ಸೆ.10ರಂದು ದೆಹಲಿಯಲ್ಲಿ ಮುಖ್ಯಮಂತ್ರಿಗಳು ಹಾಗೂ ಕೈಗಾರಿಕೋದ್ಯಮಿಗಳ ನಡುವೆ ಸಂವಾದ ಕಾರ್ಯಕ್ರಮ ನಡೆಯಲಿದೆ.  
 
ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡ ತೆರಳುತ್ತಿದ್ದು, ಅಂದು ಬೆಳಗ್ಗೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರೋಡ್ ಶೋ ನಡೆಸಲಿದ್ದಾರೆ. ಬಳಿಕ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉದ್ಯಮಿಗಳೊಂದಿಗೆ ಸಂವಾದ ನಡೆಸಲಿರುವ ಸಿಎಂ, ಉದ್ಯಮಿಗಳನ್ನು ರಾಜ್ಯದತ್ತ ಸೆಳೆದು ಉದ್ಯೋಗ ಸೃಷ್ಟಿಸಲು ಹುನ್ನಾರ ಹೆಣೆದಿದ್ದಾರೆ. 
 
ಇನ್ನು ಇದೇ ಸಂವಾದ ಕಾರ್ಯಕ್ರಮಕ್ಕೆ ರಾಜ್ಯದ ಕೈಗಾರಿಕಾ ಸಚಿವ ಆರ್.ವಿ. ದೇಶಪಾಂಡೆ ಕೂಡ ತೆರಳುತ್ತಿದ್ದು, ಸಿಎಂ ಸಿದ್ದರಾಮಯ್ಯ ಅವರಿಗೆ ಸಾಥ್ ನೀಡಲಿದ್ದಾರೆ. 

Share this Story:

Follow Webdunia kannada