ಹೈಕಮಾಂಡ್ ಎದುರು ಸಿದ್ದರಾಮಯ್ಯ ವೀಕ್ ಆಗಿದಾರೆ-ಬಸವರಾಜ ಬೊಮ್ಮಾಯಿ

Webdunia
ಗುರುವಾರ, 3 ಆಗಸ್ಟ್ 2023 (21:00 IST)
ದಿಲ್ಲಿಯಲ್ಲಿ ಕಾಂಗ್ರೆಸ್ ಸಭೆಗೆ ನಮ್ಮ ಅಭ್ಯಂತರ ಇಲ್ಲ.ಆದರೆ ಇಡಿ ಸಂಪುಟ ಸದಸ್ಯರು ಹೋಗಿ ಮೀಟಿಂಗ್ ಮಾಡಿದ್ದಾರೆ .ಇತಿಹಾಸದಲ್ಲಿ ಹೀಗೆ ನಡೆದಿಲ್ಲ.ಸುರ್ಜೆವಾಲಾ ಇಲ್ಲಿ ಸರ್ಕಾರಿ ಸಭೆಯಲ್ಲಿ ಪಾಲ್ಗೊಳ್ತಾರೆ.ಇದು ಜನರಿಗೆ ಮಾಡುವ ಅವಮಾನ .ಕೇವಲ ಎರಡೇ ತಿಂಗಳಲ್ಲಿ ದಿಲ್ಲಿಯಲ್ಲಿ ಇಂತಹ ಸಭೆ ಏಕೆ ?ಸಂಪುಟದಲ್ಲಿ, ಅಧಿಕಾರಿಗಳಲ್ಲಿ ಹೊಂದಾಣಿಕೆ ಇಲ್ಲ.ವರ್ಗಾವಣೆ ದಂಧೆ ನಡೀತಾ ಇದೆ .ಸ್ವಜನ ಪಕ್ಷಪಾತ, ಭ್ರಷ್ಟಾಚಾರ ಸ್ಪಷ್ಟವಾಗಿ ಕಾಣ್ತಿದೆ .ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.ಈ ವೇಳೆ ಸರ್ಕಾರದ ನಡೆ ಸರಿಯಲ್ಲ.ಹೈಕಮಾಂಡ್ ಎದುರು ಸಿದ್ದರಾಮಯ್ಯ ವೀಕ್ ಆಗಿದಾರೆ.ಎಲ್ಲದರಲ್ಲೂ ಕಾಂಗ್ರೆಸ್ ಹೈಕಮಾಂಡ್ ಹಸ್ತಕ್ಷೇಪ ಮಾಡ್ತಿದೆ.ದಿಲ್ಲಿಯಿಂದ ರಾಜ್ಯದ ಆಡಳಿತ ನಡಿತಾ ಇದೆ .ಚುನಾವಣೆ ಪೂರ್ವ ಕನ್ನಡದ ಅಸ್ಮಿತೆ ಬಗ್ಗೆ ಮಾತನಾಡಿದ್ರು.ಈಗ ದಿಲ್ಲಿಯಲ್ಲಿ ಹೈಕಮಾಂಡ್ ಗೆ ಅಡಿಯಾಳಾಗಿದ್ದಾರೆ .ಇದು ಕನ್ನಡದ ಅಸ್ಮಿತೆಗೆ ಧಕ್ಕೆ ಅಲ್ವಾ ? ಅಂತಾ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಕಿಡಿಕಾರಿದ್ದಾರೆ.
 
ಇನ್ನೂ ದೆಹಲಿಯ ಕಾಂಗ್ರೆಸ್ ನಾಯಕರ  ಸಭೆ ವಿಚಾರ‌ವಾಗಿ ಬೆಂಗಳೂರಲ್ಲಿ ಮಾಜಿ ಸಿಎಂ ಬಸವರಾಜ್ ಬೊಮ್ಮಾಯಿ ಪ್ರತಿಕ್ರಿಯಿಸಿದ್ದು,ಕಾಂಗ್ರೆಸ್ ನಿಂದ ಮೊದಲಿಂದಲೂ ಎಲ್ಲವೂ ಸರಿಯಲ್ಲ ಎಂಬುದು ಸ್ಪಷ್ಟ ವಾಗ್ತಿದೆ.ವರ್ಗಾವಣೆ ದಂಧೆ ಹಗಲು ದರೋಡೆ ಆಗಿದೆ.ಸಚಿವರು ಅಧಿಕಾರಿಗಳ ನಡುವೆ ಹೊಂದಾಣಿಕೆ ಇಲ್ಲ.ಭ್ರಷ್ಟಾಚಾರ ಸ್ಪಷ್ಟ ವಾಗಿ ಕಾಣಿಸ್ತಿದೆ.ಇದು ಆಡಳಿತದ ಮೇಲೆ ಪರಿಣಾಮ ಬೀಳ್ತಿದೆ.ಸಿದ್ದರಾಮಯ್ಯ ಒನ್, ಮತ್ತೆ ಸಿದ್ದರಾಮಯ್ಯ ಟು ನಲ್ಲಿ ಬಹಳ ವ್ಯತ್ಯಾಸ ಇದೆ.ಮೊದಲಿದ್ದ ಸಿದ್ದರಾಮಯ್ಯ ಬೇರೆ, ಇವಾಗಿನ ಸಿದ್ದರಾಮಯ್ಯ ಬೇರೆ.ಸಿದ್ದರಾಮಯ್ಯ ವರಿಷ್ಠರ ಬಳಿ ತಲೆ ಬಾಗಿರೋದು ಬಹಳ ವಿರಳ.ಸಿದ್ದರಾಮಯ್ಯ ಬಹಳ ವೀಕ್ ಆಗಿದ್ದಾರೆ
 
ಸಿದ್ದರಾಮಯ್ಯ ನೇಚರ್ ಬೇರೆ, ಅವರು ಮೊದಲಿನ ತರ ಸಿಡಿದೇಳ್ತಿಲ್ಲ.ಇವಾಗ ವರಿಷ್ಠರು ಮಾತನ್ನು ಚಾಚು ತಪ್ಪದೇ ಪಾಲಿಸ್ತಿದ್ದಾರೆ.ಸರ್ಕಾರದಲ್ಲಿ ಹೈಕಮಾಂಡ್ ನಿಂದಲೂ ಹಸ್ತಕ್ಷೇಪ ನಡೀತ್ತಿದೆ.ಸರ್ಕಾರ ರಿಮೋಟ್ ಕಾಂಗ್ರೆಸ್ ನಿಂದ ಹೈಕಮಾಂಡ್ ಕೈಯಲ್ಲಿದೆ.ನಿನ್ನೆಯ ಸಭೆಯಲ್ಲಿ ಕಪ್ಪ ಕಾಣಿಕೆ ಬಗ್ಗೆ ಚರ್ಚೆ ಮಾಡಿದ್ದಾರೆ.ಕಾಂಗ್ರೆಸ್ ಸರ್ಕಾರ ಬಂದಾಗ್ಲಿಂದ ಹಿಡಿದು ಕಪ್ಪ ಕಾಣಿಕೆ ಹೈಕಮಾಂಡ್ ಗೆ ಕೊಡೋದು ಹೊಸದಲ್ಲ.ಇವಾಗ ನಿನ್ನೆ ನಡೆದ ಸಭೆಯಲ್ಲೂ ಮುಂದುವರಿದಿದೆ.
 
ಕಾಂಗ್ರೆಸ್ ಶಾಸಕ ಬಸವರಾಜ್ ರಾಯರೆಡ್ಡಿ ಅಸಮಧಾನ ವಿಚಾರವಾಗಿ ಬೊಮ್ಮಯಿ ಪ್ರತಿಕ್ರಿಯಿಸಿದ್ದು,ಬಸವರಾಜ್ ರಾಯರೆಡ್ಡಿ, ದೊಡ್ಡ ಮೇದಾವಿಗಳು ಅವರ ಮಾತಿಗೆ ವಿಶ್ಲೇಷಣೆ ಬಗ್ಗೆ ಅವರೇ ಹೇಳಬೇಕು ಎಂದು  ಬೊಮ್ಮಾಯಿ ಟಾಂಗ್ ಕೊಟ್ಟಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಆರ್‌ಎಸ್‌ಎಸ್‌, ಬಿಜೆಪಿ ಸಿದ್ಧಾಂತ ದೇಶವನ್ನು ನಾಶಪಡಿಸುತ್ತದೆ: ಮಲ್ಲಿಕಾರ್ಜುನ ಖರ್ಗೆ

ಬಿಜೆಪಿ ಸಾರ್ವಜನಿಕರ ನಂಬಿಕೆಯನ್ನು ಕಳೆದುಕೊಂಡಿದೆ: ಪ್ರಿಯಾಂಕಾ ಗಾಂಧಿ

ಮತ್ತಷ್ಟು ದಾಖಲೆ ಸಮೇತ ಎದುರು ಬರುತ್ತೇವೆ: ಗುಡುಗಿದ ಡಿಕೆ ಶಿವಕುಮಾರ್‌

ಸಿಡ್ನಿ: ಗುಂಡಿನ ದಾಳಿಯಲ್ಲಿ ಹಲವಾರು ಮಂದಿ ಸಾವು

ಆವರಿಸಿದ ದಟ್ಟ ಮಂಜು, ಕಾಲುವೆಗೆ ಉರುಳಿದ ಕಾರು, ದಂಪತಿ ದುರಂತ ಅಂತ್ಯ

ಮುಂದಿನ ಸುದ್ದಿ
Show comments