Webdunia - Bharat's app for daily news and videos

Install App

ಡಿಕೆ ಶಿವಕುಮಾರ್ ಬೆಂಬಲಿಗರನ್ನು ತಡೆಯಲು ಸಿದ್ದರಾಮಯ್ಯ ಮಾಸ್ಟರ್ ಪ್ಲ್ಯಾನ್

Krishnaveni K
ಶುಕ್ರವಾರ, 21 ನವೆಂಬರ್ 2025 (08:47 IST)
ಬೆಂಗಳೂರು: ಡಿಕೆ ಶಿವಕುಮಾರ್ ಪರ ದೆಹಲಿಗೆ ಹೋಗಿ ಲಾಬಿ ಮಾಡಿಕೊಂಡು ಬರಲು ಹೋದ ಬೆಂಬಲಿಗರನ್ನು ತಡೆಯಲು ಸಿದ್ದರಾಮಯ್ಯ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ.

ಡಿಕೆ ಶಿವಕುಮಾರ್ ಸಿಎಂ ಆಗಬೇಕು ಎಂದು ಬಯಸುವ ಬೆಂಬಲಿಗ ನಾಯಕರಿಗೆ ಕೃಷಿ ಸಚಿವ ಚೆಲುವರಾಯಸ್ವಾಮಿ ನೇತೃತ್ವ. ಆದರೆ ಸಿಎಂ ಸಿದ್ದರಾಮಯ್ಯ ಇಂತಹ ರಾಜಕಾರಣದಲ್ಲಿ ಪಳಗಿದ ಹುಲಿ. ಅವರಿಗೆ ಇದನ್ನೆಲ್ಲಾ ಹೇಗೆ ಎದುರಿಸಬೇಕು ಎಂದು ಚೆನ್ನಾಗಿಯೇ ಕರಗತವಾಗಿದೆ.

ಈ ಕಾರಣಕ್ಕೆ ದೆಹಲಿಗೆ ಹೋಗಿರುವ ಚೆಲುವರಾಯಸ್ವಾಮಿಯವರು ಹೈಕಮಾಂಡ್ ನಾಯಕರನ್ನು ಭೇಟಿ ಮಾಡುವ ಮೊದಲೇ ಸಿದ್ದರಾಮಯ್ಯನವರು ಅವರನ್ನು ವಾಪಸ್ ಕರೆಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ. ಇಂದು ಬೆಳಿಗ್ಗೆ ತುರ್ತಾಗಿ ಮೆಕ್ಕೆಜೋಳ ಖರೀದಿಸುವ ಸಂಬಂಧ ತುರ್ತು ಸಭೆ ಕರೆದಿದ್ದಾರೆ. ಇದಕ್ಕೆ ಕೃಷಿ ಸಚಿವರನ್ನು ಉಪಸ್ಥಿತರಿರಲು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಈ ಮೂಲಕ ಡಿಕೆಶಿ ಬೆಂಬಲಿಗರ ಒಗ್ಗಟ್ಟು ಮುರಿಯಲು ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ.

ಹೀಗಾಗಿ ಈಗ ಕೃಷಿ ಸಚಿವರು ಸಿಎಂ ಮಾತಿಗೆ ಓಗೊಟ್ಟು ದೆಹಲಿ ಬಿಟ್ಟು ಬೆಂಗಳೂರಿಗೆ ಬರುತ್ತಾರಾ ನೋಡಬೇಕಿದೆ. ಒಂದು ವೇಳೆ ಬರದೇ ಹೋದರೆ ಸಿದ್ದರಾಮಯ್ಯ ಮತ್ತು ಡಿಕೆಶಿ ಬಣದ ನಡುವಿನ ತಿಕ್ಕಾಟ ಇನ್ನೊಂದು ಹಂತಕ್ಕೆ ಹೋಗುವ ಸಾಧ್ಯತೆಯಿದೆ. ಹೀಗಾಗಿ ಇಂದು ಈ ಬಣಗಳ ತಿಕ್ಕಾಟ ಎಲ್ಲಿಗೆ ತಲುಪುತ್ತದೆ ಎಂದು ಕಾದು ನೋಡಬೇಕಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Video,ಪಾಕ್‌ನ ಗ್ಯಾಂಗ್‌ಸ್ಟರ್‌ ಉಜೈರ್‌ ಬಲೋಚ್‌ ಸಹೋದರನಿಗೆ ಗುಂಡೇಟು, ಸ್ಥಿತಿ ಗಂಭೀರ

ಗಾಯಗೊಂಡ ದೆಹಲಿ ಪೊಲೀಸರ ಕುಟುಂಬಸ್ಥರು ಅಳುತ್ತಿದ್ದಾರೆ ಎಂದಿದ್ದಕ್ಕೆ ನೀವು ಬಿಜೆಪಿಯವರಾ ಎಂದ ರಾಹುಲ್ ಗಾಂಧಿ Video

ರಾಜ್ಯದ ಹಿತಕ್ಕಾಗಿ ನಾವಿದ್ದೇವೆ, ದಯವಿಟ್ಟು ಬಂದ್ ಕೈಬಿಡಿ: ಡಿಕೆ ಶಿವಕುಮಾರ್‌

ಮಂಡ್ಯದಲ್ಲಿ ಬಿಜೆಪಿ ನಾಯಕರ ಕಾವೇರಿ ಹೋರಾಟದ ಕಿಚ್ಚು: ಯಾರು ಏನೆಲ್ಲಾ ಹೇಳಿದ್ರು ನೋಡಿ

ದೃಶ್ಯಂ ಸಿನಿಮಾವನ್ನು ಮೀರಿಸುವ ಗುಜರಾತ್‌ನಲ್ಲಿ ನಡೆದ ಈ ಪ್ರಕರಣ, ಇಲ್ಲಿದೆ ಮಾಹಿತಿ

ಮುಂದಿನ ಸುದ್ದಿ
Show comments