Select Your Language

Notifications

webdunia
webdunia
webdunia
webdunia

ಮನವೊಲಿಸುವಲ್ಲಿ ಸಿದ್ದರಾಮಯ್ಯ ಸಮರ್ಥರು: ಮಲ್ಲಿಕಾರ್ಜುನ್ ಖರ್ಗೆ

ಮನವೊಲಿಸುವಲ್ಲಿ ಸಿದ್ದರಾಮಯ್ಯ ಸಮರ್ಥರು: ಮಲ್ಲಿಕಾರ್ಜುನ್ ಖರ್ಗೆ
ಬಾಗಲಕೋಟೆ , ಬುಧವಾರ, 28 ಜನವರಿ 2015 (15:38 IST)
ಅಬಕಾರಿ ಖಾತೆ ಸಚಿವರಾಗಿ ಮುಂದುವರಿಯುವುದಿಲ್ಲ ಎಂದು ರಾಜೀನಾಮೆ ಸಲ್ಲಿಸಿರುವ ಸತೀಶ್ ಜಾರಕಿಹೋಳಿ ಅವರನ್ನು ಸಿಎಂ ಸಿದ್ದರಾಮಯ್ಯನವರೇ ಮನವೊಲಿಸಿ ಮುಂದುವರಿಯವಂತೆ ಮಾಡುತ್ತಾರೆ. ಹಾಗಾಗಿ ನಾನು ಮಧ್ಯ ಪ್ರವೇಶಿಸುವುದಿಲ್ಲ ಎಂದು ಲೋಕಸಭಾ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆ ಇಂದು ಜಿಲ್ಲೆಯ ಹುನಗುಂದ ತಾಲೂಕಿನ ಇಳಕಲ್‌ನಲ್ಲಿ ತಿಳಿಸಿದರು. 
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜೀನಾಮೆ ವಿಷಯ ನನ್ನ ಕಿವಿಗೆ ಬಿದ್ದಿದೆ. ಆದರೆ ನಾನು ಯಾವುದೇ ರೀತಿಯಾಗಿಯೂ ಮಧ್ಯ ಪ್ರವೇಶಿಸುವುದಿಲ್ಲ. ಏಕೆಂದರೆ ಸಿಎಂ ಸಿದ್ದರಾಮಯ್ಯ ಹಾಗೂ ಸತೀಶ್ ಜಾರಕಿಹೋಳಿ ಅವರ ಸಂಬಂಧ ತುಂಬಾ ಉತ್ತಮವಾಗಿದ್ದು, ತಲೆದೋರಿರುವ ಸಮಸ್ಯೆಯನ್ನು ಅವರೇ ಬಗೆಹರಿಸಲಿದ್ದಾರೆ. ಜಾರಕಿಹೋಳಿ ಅವರನ್ನು ಮನವೊಲಿಸಿ ಮುಂದುವರಿಯವಂತೆ ಮಾಡುತ್ತಾರೆ. ಹಾಗಾಗಿ ನಾನು ಮಧ್ಯ ಪ್ರವೇಶಿಸುವುದಿಲ್ಲ ಎಂದಿದ್ದಾರೆ. 
 
ಅಬಕಾರಿ ಇಲಾಖೆ ಸಚಿವರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸತೀಶ್ ಜಾರಕಿಹೋಳಿ, ನಿನ್ನೆ ಫ್ಯಾಕ್ಸ್ ಮೂಲಕ ಸಿಎಂ ಸಿದ್ದರಾಮಯ್ಯ ಹಾಗೂ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರಿಗೆ ತಮ್ಮ ರಾಜೀನಾಮೆ ಪತ್ರವನ್ನು ಸಲ್ಲಿಸಿದ್ದರು. 

Share this Story:

Follow Webdunia kannada