Select Your Language

Notifications

webdunia
webdunia
webdunia
webdunia

81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ಸಿದ್ದಲಿಂಗಯ್ಯ ಆಯ್ಕೆ

81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಸಾಹಿತಿ ಸಿದ್ದಲಿಂಗಯ್ಯ ಆಯ್ಕೆ
ಹಾಸನ , ಶುಕ್ರವಾರ, 19 ಡಿಸೆಂಬರ್ 2014 (16:43 IST)
ಜಿಲ್ಲೆಯ ಶ್ರವಣಬೆಳಗೊಳದಲ್ಲಿ 2015ರ ಫೆ.1 ರಿಂದ 3ರವರೆಗೆ ನಡೆಯುವ 81ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅಂತಿಮವಾಗಿ ದಲಿತ ಸಾಹಿತಿ ಡಾ.ಸಿದ್ದಲಿಂಗಯ್ಯ ಆಯ್ಕೆಯಾಗಿದ್ದಾರೆ. 
 
ಸಾಹಿತಿಗಳಾದ ಎನ್.ವಿ.ವೆಂಕಟಶಾಸ್ತ್ರಿ, ಹಂಪಾ ನಾಗರಾಜ್, ಬರಗೂರು ರಾಮಚಂದ್ರಪ್ಪ ಹಾಗೂ ಸಿದ್ದಲಿಂಗಯ್ಯನವರು ಆಯ್ಕೆ ಪಟ್ಟಿಯಲ್ಲಿದ್ದರು. ಆಯ್ಕೆ ಸಮಿತಿ ನಡೆಸಿದ ಅಂತಿಮ ಸುತ್ತಿನಲ್ಲಿ ಡಾ.ಸಿದ್ದಲಿಂಗಯ್ಯ ಈ 81ನೇ ಸಮ್ಮೇಳನದ ಅಧ್ಯಕ್ಷ ಸ್ಥಾನಕ್ಕೆ ನೇಮಕಗೊಂಡರು.
 
ಇದಕ್ಕೂ ಮುನ್ನ ದೇವನೂರು ಮಹಾದೇವ ಅವರಿಗೆ ಅವಕಾಶ ಕೊಡಲಾಗಿತ್ತು. ಆದರೆ ಅವರು ನಿರಾಕರಿಸಿದ ಹಿನ್ನೆಲೆಯಲ್ಲಿ ಸಮಿತಿ ಮೂಲಕ ಆಯ್ಕೆ ಮಾಡಲಾಯಿತು ಎಂದು ತಿಳಿದು ಬಂದಿದೆ. 

Share this Story:

Follow Webdunia kannada