Webdunia - Bharat's app for daily news and videos

Install App

ಕರ್ನಾಟಕದ ಇಬ್ಬರು ಯೋಧರ ಪಾರ್ಥಿವ ಶರೀರಗಳು ಸದ್ಯದಲ್ಲೇ ಹುಟ್ಟೂರಿಗೆ

Webdunia
ಶನಿವಾರ, 13 ಫೆಬ್ರವರಿ 2016 (14:17 IST)
ಸಿಯಾಚಿನ್ ನೀರ್ಗಲ್ಲು ಪ್ರದೇಶದಲ್ಲಿ ಹಿಮಪಾತದಿಂದ ಮೃತಪಟ್ಟ 9 ಯೋಧರ ಶವಗಳನ್ನು ಬೇಸ್ ಕ್ಯಾಂಪ್‌ ಲೆಹ್‌‍ಗೆ ರವಾನಿಸಲಾಗಿದೆ. ಮೈಸೂರು ಹೆಚ್.ಡಿಕೋಟೆ ಯೋಧ ಮಹೇಶ್, ಹಾಸನದ ಯೋಧ ನಾಗೇಶ್ ಅವರ ದೇಹಗಳು ಕೂಡ ಇವುಗಳಲ್ಲಿ ಸೇರಿದೆ. ನಾಳೆ ಬೆಳಿಗ್ಗೆ ಇವರ ದೇಹಗಳನ್ನು ದೆಹಲಿಗೆ ರವಾನಿಸಲಾಗುತ್ತದೆ. ಸಿಯಾಚಿನ್ ಪ್ರದೇಶದಲ್ಲಿ  ಪ್ರತಿಕೂಲ ಹವಾಮಾನದ ಕಾರಣದಿಂದ ಮೃತದೇಹಗಳನ್ನು ತೆಗೆಯಲು ವಿಳಂಬವಾಗಿತ್ತು.

 ಮಹೇಶ್ ಮತ್ತು ನಾಗೇಶ್ ಅವರ ಹುಟ್ಟೂರುಗಳಲ್ಲಿ ಅವರ ಪಾರ್ಥಿವ ಶರೀರಗಳಿಗೆ ಅಂತ್ಯ ಸಂಸ್ಕಾರ ನಡೆಸಲು ಸಕಲ ಸಿದ್ದತೆ ನಡೆಸಲಾಗುತ್ತಿದ್ದು, ಇವರಿಬ್ಬರ ಶರೀರಗಳು ದೆಹಲಿಯಿಂದ ವಿಮಾನದಲ್ಲಿ ಬೆಂಗಳೂರಿಗೆ ನಂತರ ಅವರ ಹುಟ್ಟೂರಿಗೆ ಕಳಿಸಲಾಗುತ್ತದೆ.

ಲ್ಯಾನ್ಸ್ ನಾಯಕ್ ಹನುಮಂತಪ್ಪ ಅವರು ಹಿಮಪಾತದಲ್ಲಿ 6 ದಿನಗಳು ಹೂತುಹೋಗಿದ್ದರೂ ಬದುಕುಳಿದು ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ತೀವ್ರ ಅಂಗಾಂಗ ವೈಫಲ್ಯದಿಂದ ಅವರು ಮೃತಪಟ್ಟಿದ್ದು,  ಅವರ ಅಂತ್ಯಕ್ರಿಯೆಯನ್ನು ಸಕಲ ಗೌರವದೊಂದಿಗೆ ನೆರವೇರಿಸಲಾಯಿತು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments