Webdunia - Bharat's app for daily news and videos

Install App

ಬಾಗಿಲು ಮುಟ್ಟಿದ್ರೂ ಶಾಕ್, ಕಾರ್ ಡೋರ್ ಮುಟ್ಟಿದ್ರೂ ಶಾಕ್

Webdunia
ಭಾನುವಾರ, 12 ಮಾರ್ಚ್ 2023 (19:39 IST)
ಕರೆಂಟ್ ಶಾಕ್ ಅಂದ್ರೆ ಒಂದು ಸ್ವಿಚ್ ಹಾಕುವಾಗ ಅಥವಾ ವೈಯರ್ ಸರಿಯಾಗಿ ಇಲ್ದೆ ಇದ್ದಾಗ ನಾವು ಮುಟ್ಟಿದಾಗ ಆಗುತ್ತೆ, ಆದ್ರೆ ಇತ್ತೀಚಿನ‌ ದಿನಗಳಲ್ಲಿ ಬರೀ ಮನೆ ಬಾಗಿಲು ಮುಟ್ಟಿದ್ರೂ ಶಾಕ್ ಹೊಡಿತಿದೆ, ಕಾರ್ ಡೋರ್ ಮುಟ್ಟಿದ್ರೂ ಶಾಕ್ ಆಗ್ತಿದೆ.‌ಈ ರೀತಿ ಅನುಭವ ಒಂದಲ್ಲ ಒಂದು ರೀತಿಯಲ್ಲಿ ಎಲ್ರಿಗೂ ಆಗೇ‌ ಇರುತ್ತೆ, ಕೆಲವೊಂದು ಸರಿ ಅಂತೂ ಒಂದೇ ದಿನದಲ್ಲಿ ಬೇರೆ ಬೇರೆ ವಸ್ತುಗಳನ್ನ ಮುಟ್ಟಿದಾಗ ಈ ಶಾಕ್ ಅನುಭವ ಆಗಿದೆ. ಆದ್ರೆ‌ ಇತ್ತೀಚಿನ ದಿನಗಳಲ್ಲಿ ನೋಡಿದ್ರೆ ಹೀಗೆ ಶಾಕ್ ಹೊಡೆಯೋದು ಅನೇಕರಿಗೆ ಹೆಚ್ಚಾಗಿದೆ. ಆದ್ರೆ ಇದಕ್ಕೆ ಕಾರಣ ಏನು ಅಂತ ಮಾತ್ರ ಯಾರಿಗೂ‌ ಗೊತ್ತಿಲ್ಲ. 
 
 ಈ ರೀತಿಯ ಶಾಕಿಂಗ್ ಅನುಭವ ಯಾಕೆ ಆಗ್ತಿದೆ ಅಂತ ಹುಡುಕ್ತ ಹೋದಾಗ ಸಿಕ್ಕಿದ ಮಾಹಿತಿ ಹೀಗೆ .ಈ ರೀತಿ ಸ್ವಲ್ಪ ಪ್ರಮಾಣದ ಕರೆಂಟ್ ಶಾಕ್‌ಗೆ ಸ್ಟಾಟಿಕ್  ಚಾರ್ಜ್ ಅಂತ ಹೇಳಲಾಗುತ್ತೆ, ಬೇಸಿಗೆ ವೇಳೆ ಗಾಳಿಯಲ್ಲಿ ಮಾಯಿಶ್ಚರ್ ಕಡಿಮೆಯಾಗೋ ಕಾರಣದಿಂದ ಜೊತೆಗೆ ಅಣುವಿನ ಎರಡು ಆಬ್ಜೆಕ್ಟ್ ಅಂದ್ರೆ ಪಾಸಿಟಿವ್ ಹಾಗೂ ನೆಗೆಟೀವ್ ಒಂದಾದಾಗ ಈ ರೀತಿ ಆಗುತ್ತೆ ಎಂದು ಹೇಳಲಾಗ್ತಿದೆ. ನೆಗೆಟಿವ್ ಅಂದ್ರೆ ಐರನ್‌ ರೀತಿಯ ವಸ್ತುಗಳನ್ನೆಲ್ಲವನ್ನೂ ಮುಟ್ಟಿದಾಗ ನಮ್ಮ ದೇಹದಲ್ಲಿರೋ ಪಾಸಿಟಿವ್ ಎನರ್ಜಿ ಸೇರಿ ಶಾಕ್ ರೀತಿ ಉಂಟಾಗುತ್ತದೆ ಎಂದು ಹೇಳಲಾಗ್ತಿದೆ.
 
ಇನ್ನು ಬೇಸಿಗೆ ಕಾಲದಲ್ಲಿ ಈ ರೀತಿ ಶಾಕಿಂಗ್ ಹೆಚ್ಚಾಗ್ತಿರೋದ್ರಿಂದ ಬೇಸಿಗೆ ವೇಳೆ ನೈಲಾನ್ ಬಟ್ಟೆ, ಉಲನ್ ಬಟ್ಟೆ ಧರಿಸುವುದನ್ನು ಕಡಿಮೆ ಮಾಡಿ, ಬದಲಿಗೆ ಕಾಟನ್ ಬಟ್ಟೆಗಳನ್ನ ಧರಿಸೋದು ಉತ್ತಮ ಹಾಗೂ ತಂನೀರಿನಿಂದ ಸ್ನಾನ ಮಾಡೋದು ನೀರಿನ ಅಂಶ ಇರುವಂತಹ ಹಣ್ಣು ಸೇವನೆ ಮಾಡೋದು ಒಳ್ಳೇದು ಅಂತ ಹೇಳ್ತಿದ್ದಾರೆ. ಜೊತೆಗೆ ಜನರು ಆತಂಕವನ್ನು ಪಡುವ ಅಗತ್ಯ ಇಲ್ಲ ಅಂತಿದ್ದಾರೆ. ಎಲ್ರಿಗೂ‌ ವಸ್ತುಗಳನ್ನು ಮುಟ್ಟೋದ್ರಿಂದ ಶಾಕ್ ಫಿಲ್ ಆಗ್ತಿದ್ದು, ಜನ್ರು ಟೆನ್ಷನ್ ಬಿಟ್ಟು ತಜ್ಞರು ನೀಡಿರೋ ಸಲಹೆ ಪಡೆಯೋದು ಉತ್ತಮ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನಕ್ಕಾಗಿ ತೆರಳುತ್ತಿದ್ದ ಎಂಟು ಮಂದಿ ಭೀಕರ ರಸ್ತೆ ಅಪಘಾತದಲ್ಲಿ ಬಲಿ

ಷರತ್ತುಬದ್ಧ ಜಾಮೀನು ಪಡೆದ ಮಹೇಶ್‌ ಶೆಟ್ಟಿ ತಿಮರೋಡಿಗೆ ಮತ್ತೆ ಬಂಧನದ ಭೀತಿ

ಗಾಜಿಯಾಬಾದ್‌: ಬೀದಿ ನಾಯಿಗಳಿಗೆ ಊಟ ಹಾಕುತ್ತಿದ್ದ ಮಹಿಳೆಗೆ ಅಟ್ಟಾಡಿಸಿ ಹೊಡದ ವ್ಯಕ್ತಿ, Viral Video

ರಾಹುಲ್ ಗಾಂಧಿಯನ್ನು ಭೇಟಿಯಾದ ಕರ್ನಾಟಕದ ಟ್ಯಾಕ್ಸಿ ಚಾಲಕರಿಗೆ ಹೊಸ ಭರವಸೆ

ವಿದೇಶಿ ಶಕ್ತಿಗಳ ಕೈವಾಡವೂ ಅಡಗಿರುವ ಸಾಧ್ಯತೆ: ವಿಜಯೇಂದ್ರ

ಮುಂದಿನ ಸುದ್ದಿ
Show comments