Webdunia - Bharat's app for daily news and videos

Install App

ಕೇಂದ್ರ ಸರ್ಕಾರಕ್ಕೆ ಸುಳ್ಳು ವರದಿ ಕೊಟ್ಟರಾ ಶೋಭಾ ಕರಂದ್ಲಾಜೆ..?

Webdunia
ಬುಧವಾರ, 19 ಜುಲೈ 2017 (11:55 IST)
ಕೋಮು ಗಲಭೆಯಲ್ಲಿ ಹತ್ಯೆಗೀಡಾದವರ ಪಟ್ಟಿಯನ್ನ ಕೇಂದ್ರ ಸರ್ಕಾರಕ್ಕೆ ನೀಡಿರುವ ಸಂಸದೆ ಶೋಭಾ ಕರಂದ್ಲಾಜೆ ಬೇರೆ ಬೇರೆ ಕಾರಣಗಳಿಂದ ಮೃತಪಟ್ಟವರ ಹೆಸರುಗಳನ್ನ ಸೇರಿಸಿ 23 ಮಂದಿ ಕೋಮು ದಳ್ಳುರಿಗೆ ಬಲಿಯಾಗಿದ್ಧಾರೆಂದು ಕೇಂದ್ರ ಸರ್ಕಾರಕ್ಕೆ ಸುಳ್ಳು ವರದಿ ನೀಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
 

ಸಹೋದರಿಯಿಂದ ಹತ್ಯೆಗೀಡಾದ ಕಾರ್ತಿಕ್ ರಾಜ್, ಆತ್ಮಹತ್ಯೆ ಮಾಡಿಕೊಂಡ ಮೂಡಬಿದಿರೆಯ ವಾಮನ ಪೂಜಾರಿ ಅವರನ್ನ ಹೆಸರನ್ನೂ ಕೇಂದ್ರಕ್ಕೆ ನೀಡಿರುವ ಪಟ್ಟಿಯಲ್ಲಿ ಸೇರಿಸಿದ್ದಾರೆ. ಇದೇವೇಲೆ, ಗಲಭೆ ವೇಳೆ, ಗಾಯಗೊಂಡಿರುವ ಅಶೋಕ್ ಪೂಜಾರಿ ಸಹ ಮೃತಪಟ್ಟಿದ್ದಾರೆಂದು ವರದಿ ನೀಡಿರುವುದಾಗಿ ತಿಳಿದುಬಂದಿದೆ. ವಿಪರ್ಯಾಸವೆಂದರೆ, ಶೋಭಾ ಕರಂದ್ಲಾಜೆ ನೀಡಿರುವ ಪಟ್ಟಿಯಲ್ಲಿ ಮೊದಲನೇ ಹೆಸರೇ ಅಶೋಕ್ ಪೂಜಾರಿ ಅವರದ್ದು. ಸೆಪ್ಟೆಂಬರ್ 20ರ 2015ರಂದು ಅಶೋಕ್ ಪೂಜಾರಿ ಹತ್ಯೆಗೀಡಾಗಿದ್ದಾರೆ ಎಂದು ಉಲ್ಲೇಖಿಸಲಾಗಿದೆ. ಆದರೆ, ಅಂದು ಅಶೋಕ್ ಪೂಜಾರಿ ಮೇಲೆ ಹಲ್ಲೆ ಮಾತ್ರ ನಡೆದಿದ್ದು, ಈಗಲೂ ಜೀವಂತವಾಗಿದ್ಧಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಕೇಂದ್ರ ಸರ್ಕಾರದಿಂದ ಶಹಭಾಸ್`ಗಿರಿ ಗಿಟ್ಟಿಸಿಕೊಳ್ಳಲು ಶೋಭಾ ಕರಂದ್ಲಾಜೆ ಈ ವರದಿ ನೋಡಿದರೆ..? ರಾಜ್ಯದಲ್ಲಿ ಗಲಭೆಯಾಗು ಈ ಸಂದರ್ಭದಲ್ಲಿ ಶೋಭಾ ನೀಡಿರುವ ವರದಿ ಹಲವು ಪ್ರಶ್ನೆಗಳನ್ನ ಎತ್ತುವಂತೆ ಮಾಡಿದೆ. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಶೋಭಾ ಕರಂದ್ಲಾಜೆ, ತಪ್ಪಾಗಿರುವುದು ನಿಜ ಸರಿ ಮಾಡಿ ಮತ್ತೆ ಕಳುಹಿಸುವುದಾಗಿ ಹೇಳಿದ್ದಾರೆ. ಈ ವರದಿಯಿಂದ ಕೋಮು ದಳ್ಳುರಿ ಹೆಚ್ಚಿಸುವುದು ಶೋಭಾ ಕರಂದ್ಲಾಜೆ ಉದ್ದೇಶ ಎಂಬುದು ಸ್ಪಷ್ಟವಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments