Select Your Language

Notifications

webdunia
webdunia
webdunia
webdunia

ಭ್ರಷ್ಟ ಶೋಭಾ ಕರಂದ್ಲಾಜೆ ರಾಜಕೀಯಕ್ಕೆ ಬರುವ ಮುನ್ನವೇ ಎಸ್ಟೇಟ್ ಖರೀದಿಸಿದ್ರಾ?: ಪ್ರಸಾದ್ ಕಿಡಿ

ಭ್ರಷ್ಟ ಶೋಭಾ ಕರಂದ್ಲಾಜೆ ರಾಜಕೀಯಕ್ಕೆ ಬರುವ ಮುನ್ನವೇ ಎಸ್ಟೇಟ್ ಖರೀದಿಸಿದ್ರಾ?: ಪ್ರಸಾದ್ ಕಿಡಿ
ಚಾಮರಾಜನಗರ , ಶನಿವಾರ, 22 ನವೆಂಬರ್ 2014 (18:06 IST)
ಚಾಮರಾಜನಗರದ ಬಿಜೆಪಿ ಕಾರ್ಯಕರ್ತರು ಸಚಿವ ಮಹಾದೇವ್ ಪ್ರಸಾದ್‌ ಕಾರಿಗೆ ಮುತ್ತಿಗೆ ಹಾಕಿ ಕಳಂಕಿತ ನಾಲ್ವರು ಸಚಿವರನ್ನು ಕೈ ಬಿಡುವಂತೆ ಒತ್ತಾಯಿಸಿದ್ದಾರೆ.
 
ಇದರಿಂದ ಕೆಂಡಾಮಂಡಲವಾದ ಸಚಿವ ಪ್ರಸಾದ್, ನಿಮ್ಮ ನಾಯಕಿ ಶೋಭಾ ಕರಂದ್ಲಾಜೆ ರಾಜಕೀಯಕ್ಕೆ ಬರುವ ಮುನ್ನವೇ ಎಸ್ಟೇಟ್ ಖರೀದಿಸಿದ್ರಾ? ಯಡಿಯೂರಪ್ಪರ ವಿರುದ್ಧ ಭ್ರಷ್ಟಾಚಾರ ಆರೋಪಗಳಿಲ್ಲವಾ? ಎಂದು ಕಿಡಿಕಾರಿದ್ದಾರೆ. 
 
ಕಾಂಗ್ರೆಸ್ ಪಕ್ಷದ ನಾಲ್ವರು ಸಚಿವರ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಸಾಬೀತುಪಡಿಸಿದಲ್ಲಿ ಅಂತಹವರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಕ್ತ ಕ್ರಮ ತೆಗೆದುಕೊಳ್ಳಲಿದ್ದಾರೆ ಎಂದರು.  
 
ನಾವು ಬಿಜೆಪಿ ನಾಯಕರಂತೆ ಭೂಕಬಳಿಕೆ ಅಥವಾ ಭ್ರಷ್ಟಾಚಾರ ಮಾಡಿಲ್ಲ. ನಮ್ಮ ವಿರುದ್ಧ ಪ್ರತಿಭಟನೆ ಮಾಡಲು ಬಿಜೆಪಿ ನಾಯಕರಿಗೆ ಯಾವುದೇ ಹಕ್ಕಿಲ್ಲ ನೈತಿಕತೆಯೂ ಇಲ್ಲ
 
ಯಡಿಯೂರಪ್ಪ, ಕೆ.ಎಸ್.ಈಶ್ವರಪ್ಪ, ಕರಂದ್ಲಾಜೆ, ಸೇರಿದಂತೆ ಹಲವಾರು ಬಿಜೆಪಿ ಮುಖಂಡರು ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿದ್ದಾರೆ. ಇಂತಹ ಭ್ರಷ್ಟ ರಾಜಕಾರಣಿಗಳ ವಿರುದ್ಧ ಸೂಕ್ತ ತನಿಖೆಯಾದರೆ ಎಲ್ಲರು ಕಳಂಕಿತರೆದಂದು ಸಾಬೀತಾಗುತ್ತದೆ ಎಂದು ವ್ಯಂಗ್ಯವಾಡಿದ್ದಾರೆ.

Share this Story:

Follow Webdunia kannada