Select Your Language

Notifications

webdunia
webdunia
webdunia
webdunia

ಶಿಕಾರಿಪುರದಲ್ಲಿ ಆಪರೇಷನ್ ಹಸ್ತ ಮಾಡಿಲ್ಲ: ಸಿಎಂ ಸ್ಪಷ್ಟನೆ

ಶಿಕಾರಿಪುರದಲ್ಲಿ ಆಪರೇಷನ್ ಹಸ್ತ ಮಾಡಿಲ್ಲ: ಸಿಎಂ ಸ್ಪಷ್ಟನೆ
ಶಿವಮೊಗ್ಗ , ಬುಧವಾರ, 13 ಆಗಸ್ಟ್ 2014 (10:54 IST)
ಮಧು ಬಂಗಾರಪ್ಪ  ಜೊತೆ ದೂರವಾಣಿಯಲ್ಲಿ ಚರ್ಚೆ ಮಾಡಿದ್ದೇನೆ. ಶಿಕಾರಿಪುರ ಕ್ಷೇತ್ರಕ್ಕೆ ಮುಂಬರುವ ಉಪಚುನಾವಣೆಯಲ್ಲಿ ಜೆಡಿಎಸ್‌ ಕಾಂಗ್ರೆಸ್‌ಗೆ ಬೆಂಬಲ ನೀಡಲು ನಿರ್ಧರಿಸಿದ್ದು, ಕಾಂಗ್ರೆಸ್‌ನಿಂದ ಯಾವುದೇ ಆಪರೇಷನ್ ಹಸ್ತ ಮಾಡ್ತಿಲ್ಲ ಎಂದು ಶಿವಮೊಗ್ಗದಲ್ಲಿ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡೆಸಿ ವಿವರಣೆ ನೀಡಿದ್ದಾರೆ.  ಶಿಕಾರಿಪುರ ಜೆಡಿಎಸ್ ಮುಖಂಡ   ಬಳಿಗಾರ್ ಕಾಂಗ್ರೆಸ್‌ಗೆ ಬಾಹ್ಯ ಬೆಂಬಲ ನೀಡಲು ಒಪ್ಪಿದ್ದಾರೆ.

ನಮ್ಮ ಕಡೆಯಿಂದ ಅಭ್ಯರ್ಥಿ ಇಲ್ಲದೇ ಇರೋದರಿಂದ ನೀವು ಯಾವ ನಿರ್ಧಾರ ತೆಗೆದುಕೊಳ್ಳುತ್ತೀರೋ ನೋಡಿ ಎಂದು ಬಳಿಗಾರ್ ಅವರಿಗೆ ತಿಳಿಸಿದ್ದೆ ಎಂದು ಮಧಬಂಗಾರಪ್ಪ ಈ ಕುರಿತು ತಿಳಿಸಿದ್ದಾರೆ.  ಶಿಕಾರಿಪುರದಲ್ಲಿ ಜೆಡಿಎಸ್ ಬೆಂಬಲ ಪಡೆದಿರುವುದು ನಿಜ. ಶಾಸಕ ಮಧುಬಂಗಾರಪ್ಪ, ಬಳಿಗಾರ್ ಜೊತೆ ಚರ್ಚೆ ನಡೆಸಿದ್ದೇವೆ ಎಂದು ಸಿದ್ದರಾಮಯ್ಯ  ನುಡಿದರು. ಶಿಕಾರಿಪುರದಲ್ಲಿ ಜೆಡಿಎಸ್ ಪ್ರಾಬಲ್ಯವಿದೆ.

ಆ ಶಕ್ತಿಯನ್ನು ಬಳಸಿಕೊಳ್ಳಲು ನಿರ್ಧರಿಸಿರುವುದಾಗಿ ಸಿಎಂ ತಿಳಿಸಿದರು. ಶಿಕಾರಿಪುರದಲ್ಲಿ ಜೆಡಿಎಸ್ ಯಾವುದೇ ಅಭ್ಯರ್ಥಿಯನ್ನು ನಿಲ್ಲಿಸದಿರುವುದರಿಂದ ಕಾಂಗ್ರೆಸ್‌ಗೆ ಶಿಕಾರಿಪುರ ಕ್ಷೇತ್ರವನ್ನು ಗೆಲ್ಲುವ ಅವಕಾಶ ಹೆಚ್ಚಾಗಿದೆ. ಆದರೆ ಅಂತಿಮವಾಗಿ ಮೋದಿ ಅಲೆ ವಿಧಾನಸಭೆ ಉಪಚುನಾವಣೆಯಲ್ಲೂ ಬೀಸಿದರೆ ಕಾಂಗ್ರೆಸ್‌ಗೆ ಸೋಲು ಕಟ್ಟಿಟ್ಟ ಬುತ್ತಿಯಾಗುತ್ತದೆ. 

Share this Story:

Follow Webdunia kannada