Select Your Language

Notifications

webdunia
webdunia
webdunia
webdunia

ಶಂಕರಲಿಂಗೇಗೌಡರ ಪುತ್ರ ನಾಗೇಶ್ ಪ್ರೀತಂ ಆತ್ಮಹತ್ಯೆ ಯತ್ನ

ಶಂಕರಲಿಂಗೇಗೌಡರ ಪುತ್ರ ನಾಗೇಶ್ ಪ್ರೀತಂ ಆತ್ಮಹತ್ಯೆ ಯತ್ನ
ಚಾಮರಾಜನಗರ: , ಶನಿವಾರ, 21 ನವೆಂಬರ್ 2015 (12:23 IST)
ಚಾಮರಾಜ ಕ್ಷೇತ್ರದ ಮಾಜಿ ಶಾಸಕ ಶಂಕರಲಿಂಗೇಗೌಡ ಅವರ ಪುತ್ರ ನಾಗೇಶ್ ಪ್ರೀತಂ ಆತ್ಮಹತ್ಯೆಗೆ ಯತ್ನಿಸಿದ್ದಾರೆ.ಉದ್ಯಮದಲ್ಲಿ ನಷ್ಟ ಮತ್ತು ಸಾಲಬಾಧೆಯಿಂದ ನೊಂದು ವಿಷ ಸೇವಿಸಿದ್ದ ಇವರನ್ನು ಕೂಡಲೇ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

 ಪ್ರಾಣಾಪಾಯದಿಂದ ಈಗ ಪಾರಾಗಿದ್ದಾರೆಂದು ಹೇಳಲಾಗಿದೆ. ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಳೆದ ವರ್ಷ ಶಂಕರಲಿಂಗೇಗೌಡ ಅವರು ಮೃತರಾಗಿದ್ದರು.

 ನಾಗೇಶ್ ಸ್ಕೂಟರ್, ಟ್ರಾಕ್ಟರ್, ಟೆಂಪೊ ಶೋರೂಂ ಇಟ್ಟುಕೊಂಡಿದ್ದರು. ಆದರೆ ಇತ್ತೀಚೆಗೆ ವ್ಯಾಪಾರದಲ್ಲಿ ತೀವ್ರ ನಷ್ಟ ಅನುಭವಿಸಿದ್ದು, ಸಾಲಬಾಧೆಯಿಂದ ಕೂಡ ತತ್ತರಿಸಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. 

Share this Story:

Follow Webdunia kannada