ಅತ್ತಿಗೆಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಗೇರು ಸೊಪ್ಪದ ವೀರಾಂಜನೇಯ ದೇವಸ್ಥಾನದ ಧರ್ಮಾಧಿಕಾರಿ ಮಾರುತಿ ಗುರೂಜಿ ಅವರನ್ನು ಕೂಡಲೇ ಬಂಧಸಿ ಕ್ರಮ ಕೈಗೊಳ್ಳವಂತೆ ಒತ್ತಾಯಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಕರ್ನಾಟಕ ರಕ್ಷಣಾ ವೇದಿಕೆಯ ಅಭಿಮಾನಿಗಳ ಬಣವು ಪ್ರತಿಭಟನೆ ನಡೆಸುತ್ತಿದೆ.
ಗುರೂಜಿಯ ಫೋಟೋವನ್ನು ಧಹಿಸುವ ಮೂಲಕ ಪ್ರತಿಭಟನೆಯಲ್ಲಿ ತೊಡಗಿರುವ ಪ್ರತಿಭಟನಾಕಾರರು, ತಾಯಿ ಸ್ಥಾನದಲ್ಲಿರುವ ಅತ್ತಿಗೆ ಮೇಲೆಯೇ ಲೈಂಗಿಕ ದೌರ್ಜನ್ಯ ಎಸಗಿರುವುದು ಅಪರೂಪದ ಅಪರಾಧ. ಇದನ್ನು ರಾಜ್ಯ ಪೊಲೀಸ್ ಇಲಾಖೆ ವಿಶೇಷವಾಗಿ ಪರಿಗಣಿಸಿ ಮಾರುತಿ ಗುರೂಜಿ ಅವರನ್ನು ಬಂಧಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಜಿಲ್ಲೆಯ ಹೊನ್ನಾವರ ತಾಲೂಕಿನ ಬಂಗಾರುಮಕ್ಕಿಯಲ್ಲಿರುವ ಧರ್ಮಾಧಿಕಾರಿ ಮಾರುತಿ ಗುರೂಜಿ ಅವರಿಂದ ನನಗೆ ನಿತ್ಯ ದೈಹಿಕ ಹಾಗೂ ಮಾನಸಿಕವಾಗಿ ಹಿಂಸೆಯಾಗುತ್ತಿದೆ. ಸಂಬಂಧಿಸಿದಂತೆ ನನ್ನ ಗಂಡನಿಗೆ ದೂರನ್ನು ಕೊಟ್ಟರೂ ಕೂಡ ನೀನು ಸುಳ್ಳು ಹೇಳುತ್ತಿದ್ದೀಯ. ನನ್ನ ತಮ್ಮ ಅಂತಹವನಲ್ಲ ಎಂದು ನನ್ನನ್ನೇ ಹೊಡೆಯುತ್ತಿದ್ದರು ಎಂದು ಗುರೂಜಿ ಅವರ ಮೇಲೆ ಅವರ ಸ್ವಂತ ಅತ್ತಿಗೆ ನಯನಾ ಭಟ್ ಅವರು ನಿನ್ನೆ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.