ಕಳ್ಳರಿಗೆ ವರವಾದ ಭಾರತ ಬಂದ್: ಹಾಡುಹಗಲೇ ಸರಣಿ ಕಳ್ಳತನ

Webdunia
ಬುಧವಾರ, 9 ಜನವರಿ 2019 (15:47 IST)
ಭಾರತ್ ಬಂದ್ ವೇಳೆಯನ್ನೇ ಅವಕಾಶವನ್ನಾಗಿ ಬಳಸಿಕೊಂಡ ಕಳ್ಳರು ಹಾಡುಹಗಲೇ ತಮ್ಮ ಕೈಚಳಕ ತೋರಿದ್ದಾರೆ.

ಹಾಡು ಹಗಲೇ ಸುಮಾರು 16 ಅಂಗಡಿಗಳ ಬೀಗ ಮುರಿದು ಅಪಾರ ಹಣವನ್ನು ಕಳ್ಳರು ಕೊಳ್ಳೆ ಹೊಡೆದ ಘಟನೆ ನಡೆದಿದೆ.
ಹುಬ್ಬಳ್ಳಿಯ .ಪಿ.ಎಂ.ಸಿಯಲ್ಲಿ ನಡೆದ ಘಟನೆ ಇದಾಗಿದೆ. ನಗರದ ಅಮರಗೋಳದಲ್ಲಿರುವ .ಪಿ.ಎಂ.ಸಿ ಮಾರುಕಟ್ಟೆಯಲ್ಲಿನ ಅಂಗಡಿಗಳ ಬೀಗಗಳನ್ನು ಮುರಿದ ಕಳ್ಳರು ಸುಮಾರು 7 ಲಕ್ಷ ರೂ. ಹಣವನ್ನು ಕದ್ದು ಪರಾರಿಯಾಗಿದ್ದಾರೆ.

ವಿವಿಧ ಕಾರ್ಮಿಕ ಸಂಘಟನೆಗಳು ದೇಶಾದ್ಯಂತ ಬಂದ್ ಘೋಷಿಸಿದ್ದರ ಹಿನ್ನೆಲೆಯಲ್ಲಿ ಇಲ್ಲಿನ .ಪಿ.ಎಂ.ಸಿ ಮಾರುಕಟ್ಟೆಯಲ್ಲಿನ ವಿವಿಧ ವರ್ತಕರ ಸಂಘ, ಹಮಾಲರ ಸಂಘ ಹಾಗೂ ಇನ್ನಿತರ ಸಂಘಟನೆಗಳು ಬಂದ್ಗೆ ಬೆಂಬಲ ನೀಡಿದ್ದವು. ಇದೇ ಸಂದರ್ಭದಲ್ಲಿ .ಪಿ.ಎಂ.ಸಿ ಮಾರುಕಟ್ಟೆಯು ಬಿಕೋ ಎನ್ನುತ್ತಿದ್ದು, ಎಲ್ಲಾ ಅಂಗಡಿಗಳನ್ನು ಮುಚ್ಚಲಾಗಿತ್ತು. ಇದರ ಲಾಭ ಪಡೆದ ಕಳ್ಳರು ನಿರ್ಜನ ಪ್ರದೇಶದಲ್ಲಿ ಅಂಗಡಿಗಳ ಬೀಗ ಹಾಗೂ ಲಾಕರ್ಗಳ ಬೀಗಗಳನ್ನು ಒಡೆದು ಒಂದಾದ ಮೇಲೆ ಒಂದರಂತೆ ಸುಮಾರು 16 ಅಂಗಡಿಗಳಲ್ಲಿ ಕಳ್ಳತನವೆಸಗಿ ಸುಮಾರು 7 ಲಕ್ಷ ನಗದು ಹಣವನ್ನು ದೋಚಿದ್ದಾರೆ. ಕಳ್ಳತನ ಮಾಡುವ ದೃಶ್ಯಗಳೆಲ್ಲವೂ ಸಿ.ಸಿ. ಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇದು ಪ್ರಧಾನಿ ಮೋದಿ ಕೊಟ್ಟ ನೋಟು, ಖರ್ಚೇ ಮಾಡಲ್ಲ ಎಂದ ಹೂ ವ್ಯಾಪಾರಿ Video

ರಸ್ತೆಯಲ್ಲೇ ಶುರುವಾಯ್ತು ಹೆರಿಗೆ ನೋವು: ಮಹಿಳೆಯರೆಲ್ಲಾ ಸೇರಿಕೊಂಡು ಮಾಡಿದ್ದೇನು ನೋಡಿ Video

ರೈಲಿನಿಂದ ಬಿದ್ದ ಮಗು, ಚೈನ್ ಎಳೆದರೂ ನಿಲ್ಲಲಿಲ್ಲ: ಕರುಳು ಕಿತ್ತು ಬರುವಂತೆ ಅತ್ತ ತಾಯಿ Video

ಸಿಇಟಿ ಪರೀಕ್ಷೆಯಲ್ಲಿ ಜನಿವಾರ ತೆಗೆದ ಬ್ರಾಹ್ಮಣ ವಿದ್ಯಾರ್ಥಿಗಳಿಗೆ ಗ್ರೇಸ್ ಮಾರ್ಕ್ ಕೊಡಲು ಬೇಡಿಕೆ

ಹಾರ್ಮುಜ್ ಜಲಸಂಧಿ ವಿಚಾರದಲ್ಲಿ ಇರಾನ್ ಬಿಗ್ ಆಫರ್

ಮುಂದಿನ ಸುದ್ದಿ
Show comments