ಆನೇಕಲ್ಲು ತಾಲೂಕಿನ ಹೊಸೂರು ಮುಖ್ಯರಸ್ತೆಯ ನೆರಳೂರು ಗೇಟ್ ಬಳಿ ಸರಣಿ ಅಪಘಾತ ಸಂಭವಿಸಿ 10ಕ್ಕೂ ಹೆಚ್ಚು ಜನರು ಗಂಬೀರವಾಗಿ ಗಾಯಗೊಂಡಿದ್ದಾರೆ. ಲಾರಿ ಹೊಸೂರು ಮಾರ್ಗವಾಗಿ ಬೆಂಗಳೂರು ಕಡೆಯಿಂದ ಬರುತ್ತಿತ್ತು.
ಬಸ್ಸು ತಿರುವು ತೆಗೆದುಕೊಳ್ಳುವಾಗ ಹಿಂಭಾಗದಿಂದ ಎರಡು ಲಾರಿಗಳು ಡಿಕ್ಕಿಹೊಡೆಯಿತು ಮತ್ತು ಇನ್ನೂ ಮೂರು ಕಾರುಗಳು ಲಾರಿಗೆ ಡಿಕ್ಕಿಹೊಡೆದು ಸರಣಿ ಅಪಘಾತ ಸಂಭವಿಸಿದೆ.
ಬಸ್ ಚಾಲಕನಿಗೆ ಮತ್ತು ಲಾರಿ ಚಾಲಕನಿಗೆ ಗಂಭೀರ ಗಾಯವಾಗಿದ್ದು, ಕಾರುಗಳಲ್ಲಿದ್ದವರಿಗೆ ಕೂಡ ಗಂಭೀರ ಗಾಯಗಳಾಗಿವೆ.