Select Your Language

Notifications

webdunia
webdunia
webdunia
webdunia

ಜೂನಿಯರ್ ವಿದ್ಯಾರ್ಥಿಗಳನ್ನು ವಿವಸ್ತ್ರಗೊಳಿಸಿ ನೃತ್ಯ

ಜೂನಿಯರ್ ವಿದ್ಯಾರ್ಥಿಗಳನ್ನು ವಿವಸ್ತ್ರಗೊಳಿಸಿ ನೃತ್ಯ
ಚಿಕ್ಕಬಳ್ಳಾಪುರ , ಗುರುವಾರ, 18 ಸೆಪ್ಟಂಬರ್ 2014 (10:41 IST)
ಚಿಕ್ಕಬಳ್ಳಾಪುರದ ಅಂಬೇಡ್ಕರ್ ಕಾಲೇಜು ವಸತಿ ನಿಲಯಲ್ಲಿ ರ‌್ಯಾಗಿಂಗ್ ನಡೆದಿರುವ ಬಗ್ಗೆ ವರದಿಯಾಗಿದೆ. ನೃತ್ಯ ಮಾಡುವಂತೆ ಜೂನಿಯರ್ ವಿದ್ಯಾರ್ಥಿಗಳಿಗೆ ಸೀನಿಯರ್ ವಿದ್ಯಾರ್ಥಿಗಳು ಬಲವಂತ ಮಾಡಿದ್ದು, ನೃತ್ಯ ಮಾಡದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿದ್ದಾರೆ.   ನೃತ್ಯ ಮಾಡದ  ವಿದ್ಯಾರ್ಥಿಗಳ ಮೇಲೆ  ಟ್ಯೂಬ್‌ಲೈಟ್‌ನಿಂದ ಸೀನಿಯರ್ಸ್‌ಗಳು ಹಲ್ಲೆ  ನಡೆಸಿದರು.

ಪ್ರಸಾದ್, ಶಶಿಕುಮಾರ್, ಪ್ರವೀಣ್ ಸಂಗಡಿಗರು ಈ ಹಲ್ಲೆ ನಡೆಸಿದ್ದಾರೆ.  ಜೂನಿಯರ್ ವಿದ್ಯಾರ್ಥಿಗಳು ವಿವಸ್ತ್ರಗೊಂಡು ನೃತ್ಯಮಾಡುವಂತೆ ಸೀನಿಯರ್ ವಿದ್ಯಾರ್ಥಿಗಳು ಒತ್ತಾಯಿಸಿದರು. ಅದರಂತೆ ಕೆಲವು ಜೂನಿಯರ್ ವಿದ್ಯಾರ್ಥಿಗಳು ಬಟ್ಟೆಗಳನ್ನು ಬಿಚ್ಚಿ ನೃತ್ಯ ಮಾಡುವುದನ್ನು ಸೀನಿಯರ್ ವಿದ್ಯಾರ್ಥಿಗಳು ಎಂಜಾಯ್ ಮಾಡುತ್ತಿದ್ದರು.

ಕೆಲವು ವಿದ್ಯಾರ್ಥಿಗಳು ಬಟ್ಟೆ ಬಿಚ್ಚಲು ನಿರಾಕರಿಸಿದಾಗ ಆ ವಿದ್ಯಾರ್ಥಿಗಳ ಮೇಲೆ ಪ್ರಸಾದ್, ಶಶಿಕುಮಾರ್ ಮತ್ತು ಪ್ರವೀಣ್ ತಂಡ ಹಲ್ಲೆ ಮಾಡಿತು.  ವಿದ್ಯಾರ್ಥಿಗಳು ಪೊಲೀಸ್ ಠಾಣೆ ಎದುರು ಜಮಾಯಿಸಿ ಹಿರಿಯ ವಿದ್ಯಾರ್ಥಿಗಳ ವಿರುದ್ದ ದೂರು ನೀಡಿದರು. 

Share this Story:

Follow Webdunia kannada