Webdunia - Bharat's app for daily news and videos

Install App

ನೆರೆಗೆ ಹಾಳಾದ ಜಮೀನಲ್ಲೇ ಸೀಗೆ ಹುಣ್ಣಿಮೆ ಆಚರಣೆ: ಹಬ್ಬದ ದಿನ ಕಣ್ಣೀರು ಹಾಕಿದ ಅನ್ನದಾತ

Webdunia
ಶುಕ್ರವಾರ, 11 ಅಕ್ಟೋಬರ್ 2019 (17:08 IST)
ಪ್ರವಾಹದಿಂದ ಬೆಳೆ, ಬದುಕು ಕಳೆದುಕೊಂಡ ರೈತಾಪಿ ವರ್ಗ ಅಳಿದುಳಿದ ಜಮೀನಿನ ಬೆಳೆಯಲ್ಲೇ ಸೀಗೆ ಹುಣ್ಣಿಮೆ ಆಚರಿಸಿದ್ದು, ಜಮೀನಿನ ಪರಿಸ್ಥಿತಿ ಕಂಡು ಹಬ್ಬದಲ್ಲೂ ಕಣ್ಣೀರು ಹಾಕಿದ್ದಾರೆ.

ಧಾರವಾಡ ಜಿಲ್ಲೆಯ ಕೆಲಭಾಗಗಳಲ್ಲಿ ರೈತ ಸಮೂಹ ಸೀಗೆ ಹುಣ್ಣಿಮೆಯನ್ನು ಶ್ರದ್ಧಾ-ಭಕ್ತಿಗಳೊಂದಿಗೆ ಸಂಭ್ರಮದಿಂದ ಆಚರಿಸಿತು. ಈ ಬಾರಿ ಮಳೆಯಿಂದಾಗಿ ರೈತ ಸಮೂಹ ತೀವ್ರ ಸಂಕಷ್ಟದಲ್ಲಿದೆ. ಆದರೂ ಕೂಡ ಸಂಪ್ರದಾಯವನ್ನು ಕೈಬಿಡಬಾರದೆಂಬ ಉದ್ದೇಶದಿಂದ ರೈತರು ಭೂದೇವಿಯ ಆರಾಧನೆಯಲ್ಲಿ ನಿರತವಾಗಿ ವಿಶೇಷವಾಗಿ ಗಮನ ಸೆಳೆದರು.

 ವಿಜಯದಶಮಿಯ ಬಳಿಕ ಬರುವ ಸೀಗೆ ಹುಣ್ಣಿಮೆಗೆ ಗ್ರಾಮೀಣ ಭಾಗದಲ್ಲಿ ವಿಶೇಷ ಮಹತ್ವ ನೀಡಲಾಗುತ್ತದೆ. ಬೆಳಗ್ಗೆ ಮನೆಯಲ್ಲಿ 5 ಬಗೆಯ ಕಾಳುಗಳನ್ನು ಕುದಿಸಿ ಅವುಗಳನ್ನು ಹೊಲದ ಸುತ್ತಲೂ ಚರಗ ರೂಪದಲ್ಲಿ ಚೆಲ್ಲುವ ಸಂಪ್ರದಾಯವಿದೆ.

ಹೀಗೆ ಚರಗ ಚೆಲ್ಲುವುದರಿಂದ ಫಸಲು ಸಮದ್ಧವಾಗಿರಲಿದೆ ಎನ್ನುವ ನಂಬಿಕೆ ಜನಪದದಲ್ಲಿದೆ.  ಜಾನುವಾರುಗಳ ಮೈತೊಳೆದು ಸಿಂಗರಿಸುವುದು ಸಂಪ್ರದಾಯವಾಗಿದೆ. ಹೊಲಗಳಲ್ಲಿ ಪೂಜೆ ಮಾಡಿ ಚರಗಾ ಚಲ್ಲಿದರೇ ಕೆಲವು ಕುಟುಂಬಗಳು ಚಕ್ಕಡಿ ಕಟ್ಟಿಕೊಂಡು ಕುಟುಂಬ ಸದಸ್ಯರ ಜೊತೆಗೆ ತಮ್ಮ ಕೃಷಿ ಭೂಮಿಗೆ ತೆರಳಿದ್ರು. ಬೆಳೆದು ನಿಂತಿರುವ ಫಸಲಿಗೆ ಪೂಜೆ ಸಲ್ಲಿಸಿ, ಧನ್ಯತಾ ಭಾವದಲ್ಲಿ ತೇಲಿದರು.

ಪ್ರವಾಹದಿಂದ ನೀರುಪಾಲಾದ ಬೆಳೆಯನ್ನು ಕಂಡು ಕೆಲವು ರೈತರು ಹಬ್ಬದ ಸಂಭ್ರಮದಲ್ಲೂ ಕಣ್ಣೀರು ಹಾಕಿದ್ದಾರೆ.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

19ಮಾಜಿ ಮಂತ್ರಿಗಳ ಭದ್ರತೆ ಕೈಬಿಟ್ಟ ಗೃಹ ಸಚಿವಾಲಯ, ಆದರೆ ಸ್ಮೃತಿ ಇರಾನಿಗೆ ಯಾಕೆ ಈ ವಿಶೇಷತೆ

ಛತ್ತೀಸ್‌ಗಢ: ನಕ್ಸಲ್ ವಿರೋಧಿ ಕಾರ್ಯಾಚರಣೆಯಲ್ಲಿ ಮಹಿಳಾ ಮಾವೋವಾದಿ ಹತ್ಯೆ

ಮದ್ಯದ ಬೆಲೆ ಕೇಳಿಯೇ ನಶೆ ಏರುವಂತಾಗಿದೆ: ಬಿಜೆಪಿ ವ್ಯಂಗ್ಯ

Suhas Shetty Case: ಹತ್ಯೆ ಹಿಂದೆ ಬಜ್ಪೆ ಹೆಡ್‌ ಕಾನ್‌ಸ್ಟೇಬಲ್‌ ಭಾಗಿಯಾಗಿರುವ ಶಂಕೆ

Suhas Shetty Case: ಯುಟಿ ಖಾದರ್ ಸ್ಪೀಕರ್‌ ಆಗಿರುವವರೆಗೆ ಸಾವಿಗೆ ನ್ಯಾಯ ಸಿಗುವ ನಂಬಿಕೆಯಿಲ್ಲ

ಮುಂದಿನ ಸುದ್ದಿ
Show comments