ಕರ್ನಾಟಕ ರಕ್ಷಣಾ ವೇದಿಕೆಯ ಯುವ ಸೇನೆಯ ಬೆಂಗಳೂರು ನಗರಾಧ್ಯಕ್ಷನ ಸ್ಕಾರ್ಪಿಯೋ ವಾಹನವು ದ್ವಿಚಕ್ರ ವಾಹನವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದ ಚಾಲಕಿ ಸ್ಥಳದಲ್ಲೇ ಸಾವನಪ್ಪಿರುವ ಘಟನೆ ನಗರದ ಕೋರಾ ಬಳಿ ನಡೆದಿದೆ.
ಮೃತ ಚಾಲಕಿಯನ್ನು ಊರುಕೆರೆಯ ಅಣ್ಣೆನಳ್ಳಿಯ ನಿವಾಸಿ ನಿರ್ಮಲಾ ಅಲಿಯಾಸ್ ಲತಾ(28)ಎಂದು ಹೇಳಲಾಗಿದ್ದು, ಮೃತಳ ಜೊತೆ ಇದ್ದ ಮತ್ತೋರ್ವ ಯುವತಿ ವಿನುತಾ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾಳೆ.
ನಗರದ ಕೋರಾ ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.