Select Your Language

Notifications

webdunia
webdunia
webdunia
webdunia

ಮೈಸೂರು ಪೊಲೀಸರಿಂದ ಹಿರಿಯ ಸಾಹಿತಿ ಕೆ.ಎಸ್.ಭಗವಾನ್‌‌ಗೆ ಭಾರಿ ಭದ್ರತೆ

ಮೈಸೂರು ಪೊಲೀಸರಿಂದ ಹಿರಿಯ ಸಾಹಿತಿ ಕೆ.ಎಸ್.ಭಗವಾನ್‌‌ಗೆ ಭಾರಿ ಭದ್ರತೆ
ಮೈಸೂರು , ಸೋಮವಾರ, 31 ಆಗಸ್ಟ್ 2015 (16:22 IST)
ದುಷ್ಕರ್ಮಿಗಳಿಂದ ಹಿರಿಯ ಸಾಹಿತಿ ಕಲಬುರ್ಗಿ ಹತ್ಯೆ ಹಿನ್ನೆಲೆಯಲ್ಲಿ ಸಾಹಿತಿ ಕೆ.ಎಸ್ ಭಗವಾನ್‌ ಅವರಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
 
ಮಹಾಭಾರತ, ಶ್ರೀರಾಮ ಸೇರಿದಂತೆ ಹಲವಾರು ದೇವರುಗಳ ಬಗ್ಗೆ ಲೇವಡಿ ಮಾಡಿದ್ದ ಕೆ.ಎಸ್.ಭಗವಾನ್ ಅವರಿಗೆ ಜೀವ ಬೆದರಿಕೆ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಭಾರಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ.
 
ಕಲಬುರ್ಗಿ ಹತ್ಯೆಯ ನಂತರ ಎಚ್ಚೆತ್ತುಕೊಂಡಿರುವ ಮೈಸೂರು ಪೊಲೀಸ್ ಇಲಾಖೆ, ಭಗವಾನ್ ನಿವಾಸದ ಸುತ್ತಲೂ ಪೊಲೀಸರ ದಂಡು ನಿಯೋಜಿಸಿದೆ. ಭಗವಾನ್ ನಿವಾಸಕ್ಕೆ ಭೇಟಿ ನೀಡುವ ಪ್ರತಿಯೊಬ್ಬರು ಮೆಟಲ್ ಡಿಟೆಕ್ಟರ್ ಪರೀಕ್ಷೆಗೊಳಪಟ್ಟು ಮಾತ್ರ ಮನೆಯೊಳಗೆ ಪ್ರವೇಶಿಸಬಹುದಾಗಿದೆ.
 
ಧಾರವಾಡದಲ್ಲಿ ಹಿರಿಯ ಸಂಶೋಧಕ ಎಂ.ಎಂ.ಕಲಬುರ್ಗಿಯವರನ್ನು ಅವರ ನಿವಾಸದಲ್ಲಿಯೇ ಇಬ್ಬರು ಆರೋಪಿಗಳು ಗುಂಡಿಟ್ಟು ಹತ್ಯೆ ಮಾಡಿದ್ದರು.

Share this Story:

Follow Webdunia kannada