Select Your Language

Notifications

webdunia
webdunia
webdunia
webdunia

ಮರಳು ಮಾಫಿಯಾ: ತುಮಕೂರು ಜಿಲ್ಲಾಧಿಕಾರಿ ಹತ್ಯೆ ಯತ್ನ

ಮರಳು ಮಾಫಿಯಾ: ತುಮಕೂರು ಜಿಲ್ಲಾಧಿಕಾರಿ ಹತ್ಯೆ ಯತ್ನ
ತುಮಕೂರು , ಬುಧವಾರ, 15 ಏಪ್ರಿಲ್ 2015 (12:08 IST)
ಮರಳು ಮಾಫಿಯಾಕ್ಕೆ ಮಧ್ಯಪ್ರದೇಶದಲ್ಲಿ  ಪೊಲೀಸ್ ಪೇದೆಯೊಬ್ಬರು ಹತ್ಯೆಯಾದ ಅಮಾನುಷ ಪ್ರಕರಣದ ಕರಾಳ ನೆನಪು ಮನಃಪಟಲದಲ್ಲಿ ಹಚ್ಚಹಸಿರಾಗಿರುವಾಗ ತುಮಕೂರಿನಲ್ಲಿ ನಡೆಯುತ್ತಿರುವ ಮರಳು ಮಾಫಿಯಾ ಅಲ್ಲಿನ ಜಿಲ್ಲಾಧಿಕಾರಿ ಸತ್ಯಮೂರ್ತಿ ಬಲಿ ತೆಗೆದುಕೊಳ್ಳುವ ಪ್ರಯತ್ನ ನಡೆಸಿತ್ತು ಎಂಬ ಸ್ಪೋಟಕ ಸುದ್ದಿ ಹೊರಬಿದ್ದಿದೆ

ಸ್ವತಃ ಜಿಲ್ಲಾಧಿಕಾರಿಗಳೇ ಉಸ್ತುವಾರಿ ಸಚಿವರ ಬಳಿ ಈ ಆಘಾತಕಾರಿ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ. 
 
ಸಚಿವ ಟಿ.ಬಿ.ಜಯಚಂದ್ರ ಅಧ್ಯಕ್ಷತೆಯಲ್ಲಿ ಮಂಗಳವಾರ ಆಯೋಜನೆಯಾಗಿದ್ದ ಲಾರಿ-ಟ್ರ್ಯಾಕ್ಟರ್ ಮಾಲೀಕರ ಜತೆಗಿನ ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ಸತ್ಯಮೂರ್ತಿ ತಮ್ಮ ಹತ್ಯೆ ಯತ್ನದ ಕುರಿತ ಸತ್ಯವನ್ನು ಹೊರಹಾಕಿದ್ದಾರೆ. ಮಧುಗಿರಿಯಿಂದ ತುಮಕೂರಿಗೆ ಮರಳು ಸಾಗಿಸುತ್ತಿದ್ದ ಲಾರಿಯನ್ನು ತಡೆಯಲು ಹೋದಾಗ ನಾನು ಕುಳಿತಿದ್ದ ಕಾರಿಗೆ ಲಾರಿಯನ್ನು ಗುದ್ದಿ ಸಾಯಿಸುವ ಪ್ರಯತ್ನ ನಡೆಯಿತು. ಆದರೆ ಅದೃಷ್ಟವಶಾತ್ ನಾನು ಪ್ರಾಣಾಪಾಯದಿಂದ ಪಾರಾದೆ ಎಂದು ಸತ್ಯಮೂರ್ತಿಯವರು ಹೇಳಿದ್ದಾರೆ.

Share this Story:

Follow Webdunia kannada