Webdunia - Bharat's app for daily news and videos

Install App

ಸಂಭಾವನೆ ಇಲ್ಲದೆ ನಟಿಸಲು ಸಮಂತಾ ಒಪ್ಪಿಗೆ?!

Webdunia
ಬುಧವಾರ, 1 ಏಪ್ರಿಲ್ 2015 (10:22 IST)
ಸಾಮಾನ್ಯವಾಗಿ ಯಾರೇ ಆಗಲಿ ತಮ್ಮ ವೃತ್ತಿಯಲ್ಲಿ ಆರಂಭಿಕ ಕಾಲದಲ್ಲಿ ಇರುವಂತೆ  ಅವರ ಯಶಸ್ಸು ದೊರೆತ ನಂತರ ಇರುವುದಿಲ್ಲ. ಸಿನಿ ರಂಗದವರು ಈ ವಿಷಯದಲ್ಲಿ  ವರ್ಣಿಸಲಾಗದೆ ಇರುವಷ್ಟು ಬದಲಾಗಿರುತ್ತಾರೆ. ಸಮಂತ ಇದಕ್ಕೆ ಹೊರತಲ್ಲ. ಆಕೆ ತನ್ನ ಚಿತ್ರದ ಕಥೆ ಅದೂ ಇದೂ ಇನ್ನು ಮುಂತಾದ ಸಂಗತಿಯಲ್ಲಿ ಮೂಗುತೂರಿಸಿ ನಿರ್ದೇಶಕ ನಿರ್ಮಾಪಕರಿಗೆ ಸಲಹೆ ನೀಡುತ್ತಾಳೆ. 
ಈಕೆ ಈಗ ವಿಕ್ರಮ್ ಅವರ ಜೊತೆ ನಟಿಸುತ್ತಿರುವ ಪತ್ತುಎಂಡ್ರದುಕುಳೇ ಚಿತ್ರದಕಥೆ ಕೇಳಲೇ ಇಲ್ಲವಂತೆ. ಅದಕ್ಕೆ ಕಾರಣ ಆ ಚಿತ್ರದ ನಿರ್ದೇಶಕ ಎಂದು ಹೇಳಿದ್ದಾಳೆ. ಅಂದರೆ ಆ ನಿರ್ದೇಶಕನ ಬಗ್ಗೆ ಅಪಾರವಾದ ನಂಬಿಕೆ ಹೊಂದಿರುವ ಈಕೆ ಆ ಕಥೆಯನ್ನು ಕೇಳಲು ಹೋಗಿಲ್ಲ. ಛಾಯಾಗ್ರಾಹಕ  ವಿಜಯ್ ಮಿಲ್ಟನ್ ಗೋಲಿ ಸೋಡಾ ಎನ್ನುವ ಯಶಸ್ವಿ ಚಿತ್ರ ನಿರ್ದೇಶಕ. ಆತನ ಆ ಚಿತ್ರ ಅಭೂತಪೂರ್ವ ಯಶಸ್ಸು ಗಳಿಸಿದೆ. ಈ ಕಾರಣದಿಂದ ಆಕೆ ಪತ್ತುಎಂಡ್ರದುಕುಳೇ ಬಗ್ಗೆ ಸೊಲ್ಲು ಎತ್ತದೆ ನಟಿಸಲು ಸಿದ್ಧಳಾಗಿದ್ದಾಳೆ. 
 
ಐ ಚಿತ್ರದ ನಂತರ ವಿಕ್ರಮ್ ಅವರು ಹೀರೋ ಆಗಿ ನಟಿಸುತ್ತಿರುವ ಈ ಚಿತ್ರದಲ್ಲಿ ಸಮಂತ ಹೀರೋಯಿನ್. ಇದರಲ್ಲಿ ನಟಿಸಲೆಂದು ಆಕೆಯನ್ನು ಕೇಳಿದಾಗ ಆ ಚಿತ್ರದ ಕಥೆ ಬಗ್ಗೆ ಕೇಳದೆ ಆಕೆ ತಕ್ಷಣ ಸಮ್ಮತಿಸಿದಳಂತೆ. ವಿಜಯ್ ಅವರ ಚೊಚ್ಚಲ ಚಿತ್ರ ಗೋಲಿಸೋಡಾ ಆಕೆಗೆ ತುಂಬಾ ಇಷ್ಟ ಆಗಿದೆಯಂತೆ. ತನ್ನ ಪಾತ್ರ ಚೆನ್ನಾಗೆ ಇರುತ್ತದೆ ಎನ್ನುವ ನಂಬಿಕೆ ಆಕೆಗಿದೆಯಂತೆ ಈ ಕಾರಣದಿಂದ ತಾನು ಖುಷಿಯಿಂದ ಒಪ್ಪಿಕೊಂಡಳಂತೆ. ಗೊತ್ತಾಯ್ತಲ್ಲ ಆಕೆಯು ಯಾವ ಕಾರಣದಿಂದ ಈ ಚಿತ್ರಕ್ಕೆ ಓಕೆ ಅಂದಿದ್ದಾಳೆ ಅಂತ.

BBK10: ಕುಟುಂಬ ಜೀವನ ನಿನಗೆ ಆಗಿ ಬರೋಲ್ಲ ಎಂದ ಸ್ವಾಮೀಜಿ ಮಾತಿಗೆ ಡ್ರೋಣ್ ಪ್ರತಾಪ್ ಶಾಕ್

‘ಗೋಟ್’ ಸಿನಿಮಾ ಕತೆ ಹಾಲಿವುಡ್ ನಿಂದ ಕದ್ದಿದ್ದಾ? ಟೀಕೆಗಳಿಗೆ ನಿರ್ದೇಶಕರ ಉತ್ತರವೇನು?

ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಬಳಿಗೆ ಬರಲಿರುವ ರಾಕಿ ಭಾಯಿ ಯಶ್

ಫ್ಯಾನ್ಸ್​ ಜೊತೆ ದರ್ಶನ್ `ಕಾಟೇರ' ಸಂಭ್ರಮಾಚರಣೆ

ಪೋಸ್ಟರ್ ಜೊತೆಗೆ ದೇವರ ಸಿನಿಮಾ ಟೀಸರ್ ಬಿಡುಗಡೆ ದಿನಾಂಕವೂ ಬಹಿರಂಗ

ಶಿವಣ್ಣ 131 ನೇ ಸಿನಿಮಾ: ಒಂದಾಗ್ತಿದೆ ದೊಡ್ಮನೆ-ತೂಗುದೀಪ ಮನೆ

ಹೊಸ ವರ್ಷದ ಮೊದಲ ದಿನವೇ ಅಮ್ಮನಾಗ್ತಿರುವ ಸಿಹಿ ಸುದ್ದಿ ಕೊಟ್ಟ ಅದಿತಿ ಪ್ರಭುದೇವ

ಅಭಿಮಾನಿಗಳೊಂದಿಗೆ ಕಾಟೇರ ಸಕ್ಸಸ್ ಪಾರ್ಟಿ ಮಾಡಲಿರುವ ದರ್ಶನ್

ನ್ಯೂ ಇಯರ್ ಪಾರ್ಟಿಯಲ್ಲಿ ಗರ್ಲ್ ಫ್ರೆಂಡ್ ಜೊತೆ ಸಿಕ್ಕಿಬಿದ್ದ ಸೈಫ್ ಪುತ್ರ ಇಬ್ರಾಹಿಂ

ವೀಕೆಂಡ್ ನಲ್ಲಿ ಭರ್ಜರಿ ಗಳಿಕೆ: ಕಾಟೇರ ಒಟ್ಟು ಕಲೆಕ್ಷನ್ ಎಷ್ಟು?

Show comments