Select Your Language

Notifications

webdunia
webdunia
webdunia
webdunia

ಕರ್ನಾಟಕದ ಯೋಧ ಸಹದೇವ ಉಗ್ರರ ವಿರುದ್ಧ ಕಾಳಗದಲ್ಲಿ ಹುತಾತ್ಮ

ಕರ್ನಾಟಕದ ಯೋಧ ಸಹದೇವ ಉಗ್ರರ ವಿರುದ್ಧ ಕಾಳಗದಲ್ಲಿ ಹುತಾತ್ಮ
ನವದೆಹಲಿ: , ಭಾನುವಾರ, 14 ಫೆಬ್ರವರಿ 2016 (11:26 IST)
ಕಾಶ್ಮೀರದಲ್ಲಿ ಲಷ್ಕರೆ ತೊಯ್ಬಾ ಉಗ್ರರ ಜತೆ ಗುಂಡಿನ ಕಾಳಗದಲ್ಲಿ ಕರ್ನಾಟಕದ ಯೋಧರೊಬ್ಬರು ಹುತಾತ್ಮರಾಗಿದ್ದಾರೆ. ಕರ್ನಾಟಕದ ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಸಾವಳಸಂಗ ಗ್ರಾಮದ ಸಹದೇವ ಮಾರುತಿ ಮೋರೆ ಮೃತರಾದವರು.
 
ಕಾಶ್ಮೀರದ ಕುಪ್ವಾರಾ ಜಿಲ್ಲೆಯಲ್ಲಿ ಉಗ್ರರ ಜತೆ ಶುಕ್ರವಾರ ರಾತ್ರಿ ನಡೆದ ಗುಂಡಿನ ಕಾಳಗದಲ್ಲಿ ಇಬ್ಬರು ಸೇನಾ ಯೋಧರು ಸಾವನ್ನಪ್ಪಿದ್ದು, ಎಲ್ಲ ಐವರು ಉಗ್ರರನ್ನು ಹತ್ಯೆ ಮಾಡಲಾಗಿದೆ. ಮೃತರಲ್ಲಿ ಸಹದೇವ ಮಾರುತಿ ಮೋರೆ ಒಬ್ಬರಾಗಿದ್ದಾರೆ. ಇನ್ನೊಬ್ಬ ಯೋಧ ನಾಸಿಕ್‌ನ ಶಂಕರ್ ಚಂದ್ರಭಾನ್ ಶಿಂಧೆ. 
 
ಸಾವಳಸಂಗ ಗ್ರಾಮದ ಯೋಧನ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಭೇಟಿ ನೀಡಿ ಯೋಧನ ಕುಟುಂಬಕ್ಕೆ ಸಾಂತ್ವನ ಹೇಳಿದರು.  ಇಂದು ವಿಶೇಷ ವಿಮಾನದಲ್ಲಿ ವಿಜಯಪುರ ಸೈನಿಕಶಾಲೆಗೆ ಮೃತದೇಹವನ್ನು ತರಲಾಗುತ್ತದೆ. 
 

Share this Story:

Follow Webdunia kannada