ದೂರು ದಾಖಲಿಸಲು ಬಂದಿದ್ದ ಯುವತಿಗೆ ಅಸಭ್ಯ ಮೊಬೈಲ್ ಸಂದೇಶ ಕಳುಹಿಸಿದ ಆರೋಪದ ಮೇಲೆ ಸಬ್
ಇನ್ಸೆಪೆಕ್ಟರ್ ಒಬ್ಬರನ್ನು ಅಮಾನತುಗೊಳಿಸಲಾಗಿದೆ.
ಆರೋಪಿಯನ್ನು ಬೈಯ್ಯಪ್ಪನ ಹಳ್ಳಿ ಪೊಲೀಸ್ ಠಾಣೆ ಸಬ್ ಇನ್ಸಪೆಕ್ಟರ್ ಸೋಮಶೇಖರ್ ಎಂದು ಗುರುತಿಸಲಾಗಿದ್ದು ವಂಚನೆಗೊಳಗಾಗಿದ್ದ ಯುವತಿಯೊಬ್ಬಳು ಈ ಕುರಿತು ಪ್ರಕರಣ ದಾಖಲಿಸಲು ಬಂದಿದ್ದಳು. ತಮ್ಮಿಂದ ಹಣ ಪಡೆದು ಹಿಂತಿರುಗಿಸಲಾಗಿಲ್ಲ ಎಂದು ಆಕೆ ದೂರು ದಾಖಲಿಸಿದ್ದಳು. ದೂರು ಸ್ವೀಕರಿಸಿದ ಸೋಮಶೇಖರ್ ಲಂಚ ನೀಡುವಂತೆ ಬೇಡಿ ಇಟ್ಟಿದ್ದರು.
ಬಳಿಕ ಆಕೆಯ ಮೊಬೈಲ್ಗೆ ಅಶ್ಲೀಲ ಸಂದೇಶ ಕಳುಹಿಸಲು ಪ್ರಾರಂಭಿಸಿದ್ದಾರೆ ಎನ್ನಲಾಗಿದೆ.
ಈ ಕುರಿತು ಯುವತಿ ದೂರು ದಾಖಲಿಸಿದ್ದು ತನಿಖೆ ಪ್ರಗತಿಯಲ್ಲಿದೆ.