Webdunia - Bharat's app for daily news and videos

Install App

ವಿಚಾರಣೆ ವೇಳೆ ರೌಡಿಶೀಟರ್ ನಾಗ ಬಾಯ್ಬಿಟ್ಟ ಭಯಾನಕ ಸತ್ಯ

Webdunia
ಗುರುವಾರ, 25 ಮೇ 2017 (15:30 IST)
ಕಪ್ಪು ಹಣ ಚಲಾವಣೆ, ದರೋಡೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ರೌಡಿಶೀಟರ್ ನಾಗ ಪೊಲೀಸ್ ವಿಚಾರಣೆ ಸಂದರ್ಭದಲ್ಲಿ ಭಯಾನಕ ಸತ್ಯ ಬಾಯ್ಬಿಟ್ಟಿದ್ದಾನೆ.
 
ತಮಿಳುನಾಡಿನಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್‌ನ ಅಧಿಕಾರಿಯೊಬ್ಬರ ನೆರವಿನಿಂದ ಹಳೆ ನೋಟುಗಳನ್ನು  ಬದಲಾವಣೆ ಮಾಡುತ್ತಿದ್ದೆ. ಹಳೆ ನೋಟು ಬದಲಾವಣೆ ಸಂದರ್ಭದಲ್ಲಿ ಶೇ.20 ರಷ್ಟು ಕಮಿಶನ್ ಪಡೆಯುತ್ತಿರುವುದಾಗಿ ತಿಳಿಸಿದ್ದಾನೆ.
 
ಆದರೆ, ಜನೆವರಿ ನಂತರ ರಾಜಕಾರಣಿಗಳು, ಉದ್ಯಮಿಗಳು, ಕಪ್ಪು ಹಣ ಹೊಂದಿದವರ ಹಳೆಯ ನೋಟು ಬದಲಾವಣೆಗೆ ಶೇ.50 ರಷ್ಟು ಕಮಿಶನ್ ಪಡೆಯತ್ತಿರುವುದಾಗಿ ಮಾಹಿತಿ ನೀಡಿದ್ದಾನೆ. ಕೆಲವು ಬಾರಿ ಹಳೆಯ ನೋಟು ಬದಲಾವಣೆ ಬಂದವರನ್ನು ದರೋಡೆ ಮಾಡಿರುವ ಬಗ್ಗೆಯೂ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.
 
ಎನ್‌ಆರ್‌ಐಗಳಿಗೆ ಹಳೆಯ ನೋಟು ಬದಲಾವಣೆಗೆ ಇದ್ದ ಅವಕಾಶವನ್ನು ಬಳಸಿಕೊಂಡು ನಾಗ, ಆರ್‌ಬಿಐ ಅಧಿಕಾರಿಯ ಮೂಲಕ  ಹಳೆಯ ನೋಟುಗಳನ್ನು ಬದಲಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.
 
ಒಟ್ಟು 50 ರಿಂದ 60 ಕೋಟಿ ರೂಪಾಯಿ ಸಂಗ್ರಹಿಸಿ ಗಾಂಧಿನಗರ ಕ್ಷೇತ್ರದಿಂದ ಶಾಸಕನಾಗಲೇಬೇಕು ಎನ್ನುವ ಮಹತ್‌ಕಾಂಕ್ಷೆಯನ್ನು ಹೊಂದಿದ್ದನು. ಅದಕ್ಕಾಗಿ ಸಿದ್ದತೆ ಕೂಡಾ ನಡೆಸಿದ್ದ ಎನ್ನಲಾಗಿದೆ. ಆತನ ಕೃತ್ಯಕ್ಕೆ ಇಬ್ಬರು ಪುತ್ರರಾದ ಗಾಂಧಿ ಮತ್ತು ಶಾಸ್ತ್ರಿ ಹಾಗೂ ಪತ್ನಿ ಲಕ್ಷ್ಮಿ ಕೂಡಾ ಸಾಥ್ ನೀಡಿದ್ದರು ಎಂದು ರೌಡಿಶೀಟರ್ ನಾಗ ತಿಳಿಸಿದ್ದಾನೆ, 

 ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments