Webdunia - Bharat's app for daily news and videos

Install App

ಅಂತಾರಾಜ್ಯ ರೌಡಿ ಕಾಲಿಯಾ ರಫೀಕ್ ಕಗ್ಗೊಲೆ

Webdunia
ಬುಧವಾರ, 15 ಫೆಬ್ರವರಿ 2017 (12:13 IST)
ಮಂಗಳೂರು: ಕುಖ್ಯಾತ ಕ್ರಿಮಿನಲ್ ಉಪ್ಪಳದ ಕಾಲಿಯಾ ರಫೀಕ್ ನನ್ನು ದುಷ್ಕರ್ಮಿಗಳ ಗುಂಪೊಂದು ಗುಂಡು ಹಾರಿಸಿ ಕೊನೆಗೆ ಬರ್ಬರವಾಗಿ ಇರಿದು ಕೊಲೆ ಮಾಡದ ಘಟನೆ ಮಂಗಳವಾರ ತಡರಾತ್ರಿ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಕೋಟೆಕಾರ್ ಬಳಿ ನಡೆದಿದೆ.
ರಫುಕ್ ಸಂಚರಿಸುತ್ತಿದ್ದ ರಿಟ್ಜ್ ಕಾರಿಗೆ ಮುಂಭಾಗದಿಂದ ದಷ್ಕರ್ಮಿಗಳಯ ಮಿನಿ ಲಾರಿಯನ್ನು ಢಿಕ್ಕಿ ಹೊಡೆಸಿ, ಗುಂಡು ತೂರಾಟ ನಡೆಸಿದ್ದರು. ಬಳಿಕ  ಈತನನ್ನು ತಲವಾರಿನಿಂದ ಕಡಿದು ಕೊಲೆಗೈಯ್ದಿದ್ದಾರೆ. ಕಾರಿನಲ್ಲಿ 
 
ಜೊತೆಗಿದ್ದವನಿಗೆ  ಗಂಭೀರ ಗಾಯವಾಗಿದೆ. ಉಳ್ಳಾಲ ಇನ್ಸ್ ಪೆಕ್ಟರ್ ಗೋಪಿಕೃಷ್ಣ ನೇತೃತ್ವದ ತಂಡ ತನಿಖೆ ನಡೆಸುತ್ತಿದ್ದು, ರಫಿಕ್ ನ ಮೃತದೇಹವನ್ನು ದೇರಳಕಟ್ಟೆ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ.
 
ದರೋಡೆ, ಕೊಲೆ, ಹಲ್ಲೆಯನ್ನೇ ಕಸುಬನ್ನಾಗಿಸಿಕೊಂಡಿದ್ದ ಕಾಲಿಯಾ ರಫಿಕ್ ಅಂತಾರಾಜ್ಯ ಮಟ್ಟದ ಕ್ರಿಮಿನಲ್ ಆಗಿದ್ದನು. ಉಪ್ಪಳವನ್ನೇ ತನ್ನ ಅಡ್ಡೆಯನ್ನಾಗಿಸಕೊಂಡು ಮೆರೆದಾಡುತ್ತಿದ್ದ. ಕೇರಳ ಹಾಗೂ ಕರ್ನಾಟಕದ ವಿವಿಧ ಠಾಣೆಗಳಲ್ಲಿ ಈತನ ವಿರುದ್ಧ ಸಾಕಷ್ಟು ದೂರುಗಳು ದಾಖಲಾಗಿವೆ.
 
ಹಲವಾರು ವರ್ಷಗಳಿಂದ ಈತ ಜೈಲಿನಲ್ಲಿದ್ದು, ಕೆಲ ತಿಂಗಳ ಹಿಂದೆಯಷ್ಟೇ ಬಿಡುಗಡೆಗೊಂಡಿದ್ದನು. ಮೂರು ದಿನಗಳ ಹಿಂದೆ ಉಪ್ಪಳದ ವೈದ್ಯರೊಬ್ಬರಿಗೆ ಹಫ್ತಾಕ್ಕಾಗಿ ಬೇಡಿಕೆಯನ್ನಿಟ್ಟಿದ್ದ ಎನ್ನಲಾಗಿದೆ. ಈತನ ವಿರೋಧಿಗಳಾದ ಉಪ್ಪಳದ ಕ್ರಿಮಿನಲ್ ಗಳ ಗುಂಪು ಕೊಲೆ ನಡೆಸಿರುವ ಕುರಿತು ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments