Select Your Language

Notifications

webdunia
webdunia
webdunia
webdunia

ರೋಹಿತ್ ವೇಮುಲಾ ಆತ್ಮಹತ್ಯೆ: ನಾಳೆ ಹೈದರಾಬಾದ್‌ಗೆ ಕನ್ಹಯ್ಯಾ

ರೋಹಿತ್ ವೇಮುಲಾ ಆತ್ಮಹತ್ಯೆ: ನಾಳೆ ಹೈದರಾಬಾದ್‌ಗೆ ಕನ್ಹಯ್ಯಾ
ನವದೆಹಲಿ , ಮಂಗಳವಾರ, 22 ಮಾರ್ಚ್ 2016 (17:24 IST)
ದೇಶದ್ರೋಹ ಆರೋಪ ಹೊತ್ತು ಸುದ್ದಿಯಲ್ಲಿರುವ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಬುಧವಾರ ಹೈದರಾಬಾದ್ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಲಿದ್ದಾರೆ. 
 
ವೇಮುಲ ಸಾವಿನ ಬಳಿಕ ಅನಿರ್ದಿಷ್ಟ ರಜೆ ಮೇಲೆ ತೆರಳಿದ್ದ ವಿವಿ ಉಪಕುಲಪತಿ ಅಪ್ಪಾ ರಾವ್ ಪೊಡಿಲೆ ಇಂದು ಕೆಲಸಕ್ಕೆ ಹಿಂತಿರುಗಿದ ಹಿನ್ನೆಲೆಯಲ್ಲಿ ವಿವಿ ಆವರಣದಲ್ಲಿ ವಿದ್ಯಾರ್ಥಿಗಳು ಇಂದು ಪ್ರತಿಭಟನೆ ನಡೆಸಿದರು. 
 
ಇಂದು ಅಪ್ಪಾರಾವ್ ಪತ್ರಿಕಾಗೋಷ್ಠಿ ನಡೆಸಲಿದ್ದ ಅವರ ನಿವಾಸವನ್ನು ಪ್ರತಿಭಟನಾ ನಿರತ ವಿದ್ಯಾರ್ಥಿಗಳು ನಾಶ ಮಾಡಿದ್ದಾರೆ. 
 
ಇಂದು ಕನ್ಹಯ್ಯ ಕುಮಾರ್ ನವದೆಹಲಿಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರನ್ನು ಭೇಟಿಯಾಗಿದ್ದರು. 
 
ಕನ್ಹಯ್ಯಾ ಜೈಲಿನಿಂದ ಬಿಡುಗಡೆಗೊಂಡ ಮೇಲೆ ಇದೇ ಮೊದಲ ಬಾರಿಗೆ ರಾಹುಲ್ ಅವರನ್ನು ಕಂಡು ಮಾತನಾಡಿದ್ದರು. 

Share this Story:

Follow Webdunia kannada