Webdunia - Bharat's app for daily news and videos

Install App

ಡಿವೈಎಸ್‌ಪಿ ಕಾರನ್ನೇ ತಡೆದು ದರೋಡೆಗೆ ಯತ್ನಿಸಿದ ಭೂಪರು

Webdunia
ಬುಧವಾರ, 12 ಅಕ್ಟೋಬರ್ 2016 (19:57 IST)
ಖಾಸಗಿ ಕಾರಿನಲ್ಲಿ ತೆರಳುತ್ತಿದ್ದ ಮಧುಗಿರಿ ಡಿವೈಎಸ್‌ಪಿ ಅವರ ಕಾರು ಅಡ್ಡಗಟ್ಟಿದ ಯುವಕರ ತಂಡ ದರೋಡೆಗೆ ಯತ್ನಿಸಿದ ಘಟನೆ ಪಾವಗಡದ ಹೊರವಲಯದಲ್ಲಿ ನಡೆದಿದೆ. 
 
ಡಿವೈಎಸ್‌ಪಿ ಕಲ್ಲೇಶಪ್ಪ ಅವರು ಮಂಗಳವಾರ ರಾತ್ರಿ ಮಧುಗಿರಿಯಿಂದ ಪಾವಗಡಕ್ಕೆ ಖಾಸಗಿ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಕಾರು ಅಡ್ಡಗಟ್ಟಿದ ಪಾನಮತ್ತ ಯುವಕರು ಡಿವೈಎಸ್‌ಪಿ ಕಲ್ಲೇಶಪ್ಪನವರ ಕಾರು ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಆ ಸಮಯದಲ್ಲಿ ಕಲ್ಲೇಶಪ್ಪನವರು ನಾನು ಡಿವೈಎಸ್‌ಪಿ ಎಂದು ಹೇಳಿದರೂ ಪಾನಮತ್ತ ಯುವಕರು ಕೇಳುವ ಸ್ಥಿತಿಯಲ್ಲಿರಲಿಲ್ಲ. ಆಗ ಕಾರಿನಿಂದ ಇಳಿದ ಡಿವೈಎಸ್‌ಪಿ ಅವರು ಯುವಕರ ತಂಡವನ್ನು ಹೊಡೆದು ಹಿಡಿಯಲು ಯತ್ನಿಸಿದ್ದರು ಎನ್ನಲಾಗಿದೆ. 
 
ದರೋಡೆಗೆ ಯತ್ನಿಸಿದ ಪುಂಡ ಯುವಕರ ತಂಡದಲ್ಲಿ ದೀಪಕ್ ಹಾಗೂ ಅವಿನಾಶ್ ಎನ್ನುವವರು ಸ್ಥಳದಲ್ಲಿಯೇ ಸಿಕ್ಕಿಬಿದಿದ್ದಾರೆ. ಆದರೆ, ಉಳಿದ ಯುವಕರಾದ ಲೋಕೇಶ್ ಮತ್ತು ಶಶಿ ಎನ್ನುವ ಪುಂಡರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. 
 
ಈ ಸಂಬಂಧ ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ದರೋಡೆಕೋರ ಯುವಕರ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments