Webdunia - Bharat's app for daily news and videos

Install App

ಡಿವೈಎಸ್‌ಪಿ ಕಾರನ್ನೇ ತಡೆದು ದರೋಡೆಗೆ ಯತ್ನಿಸಿದ ಭೂಪರು

Webdunia
ಬುಧವಾರ, 12 ಅಕ್ಟೋಬರ್ 2016 (19:57 IST)
ಖಾಸಗಿ ಕಾರಿನಲ್ಲಿ ತೆರಳುತ್ತಿದ್ದ ಮಧುಗಿರಿ ಡಿವೈಎಸ್‌ಪಿ ಅವರ ಕಾರು ಅಡ್ಡಗಟ್ಟಿದ ಯುವಕರ ತಂಡ ದರೋಡೆಗೆ ಯತ್ನಿಸಿದ ಘಟನೆ ಪಾವಗಡದ ಹೊರವಲಯದಲ್ಲಿ ನಡೆದಿದೆ. 
 
ಡಿವೈಎಸ್‌ಪಿ ಕಲ್ಲೇಶಪ್ಪ ಅವರು ಮಂಗಳವಾರ ರಾತ್ರಿ ಮಧುಗಿರಿಯಿಂದ ಪಾವಗಡಕ್ಕೆ ಖಾಸಗಿ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ಕಾರು ಅಡ್ಡಗಟ್ಟಿದ ಪಾನಮತ್ತ ಯುವಕರು ಡಿವೈಎಸ್‌ಪಿ ಕಲ್ಲೇಶಪ್ಪನವರ ಕಾರು ಚಾಲಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಆ ಸಮಯದಲ್ಲಿ ಕಲ್ಲೇಶಪ್ಪನವರು ನಾನು ಡಿವೈಎಸ್‌ಪಿ ಎಂದು ಹೇಳಿದರೂ ಪಾನಮತ್ತ ಯುವಕರು ಕೇಳುವ ಸ್ಥಿತಿಯಲ್ಲಿರಲಿಲ್ಲ. ಆಗ ಕಾರಿನಿಂದ ಇಳಿದ ಡಿವೈಎಸ್‌ಪಿ ಅವರು ಯುವಕರ ತಂಡವನ್ನು ಹೊಡೆದು ಹಿಡಿಯಲು ಯತ್ನಿಸಿದ್ದರು ಎನ್ನಲಾಗಿದೆ. 
 
ದರೋಡೆಗೆ ಯತ್ನಿಸಿದ ಪುಂಡ ಯುವಕರ ತಂಡದಲ್ಲಿ ದೀಪಕ್ ಹಾಗೂ ಅವಿನಾಶ್ ಎನ್ನುವವರು ಸ್ಥಳದಲ್ಲಿಯೇ ಸಿಕ್ಕಿಬಿದಿದ್ದಾರೆ. ಆದರೆ, ಉಳಿದ ಯುವಕರಾದ ಲೋಕೇಶ್ ಮತ್ತು ಶಶಿ ಎನ್ನುವ ಪುಂಡರು ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ. 
 
ಈ ಸಂಬಂಧ ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪರಾರಿಯಾಗಿರುವ ದರೋಡೆಕೋರ ಯುವಕರ ಬಂಧನಕ್ಕೆ ಪೊಲೀಸರು ಜಾಲ ಬೀಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇಂದಿನಿಂದ ರಾಜ್ಯದಲ್ಲಿ ಕೋವಿಡ್​ ಟೆಸ್ಟಿಂಗ್ ಲ್ಯಾಬ್​ಗಳು ಓಪನ್: ಜನನಿಬಿಡ ಪ್ರದೇಶದಲ್ಲಿ ಮಾಸ್ಕ್‌ ಧರಿಸಲು ಸಲಹೆ

ಆಪರೇಷನ್ ಸಿಂಧೂರ್‌ನಿಂದ ಪಾಕ್‌ ಗಡಿಯಲ್ಲಿ ಪ್ರತಿ ಹೆಜ್ಜೆಯಿಡುವಾಗಲೂ ಯೋಚಿಸುವಂತೆ ಮಾಡಿದೆ: ಶಶಿ ತರೂರ್‌

Karnataka Weather: ವಾರದ ಮಳೆಗೆಯೇ ಸುಸ್ತಾದ ದಕ್ಷಿಣ ಕನ್ನಡ ಜನತೆ

Dehli Rain: ವಿಮಾನ ಹಾರಾಟಗಳಲ್ಲೂ ವ್ಯತ್ಯಯ ಸಾಧ್ಯತೆ, ಪ್ರಯಾಣಿಕರಿಗೆ ಹೊಸ ಸಂದೇಶ

Covid 19: ಕೋವಿಡ್‌ಗೆ ರಾಜ್ಯದಲ್ಲಿ ಮೊದಲ ಬಲಿ, ಹೆಚ್ಚಿದ ಆತಂಕ

ಮುಂದಿನ ಸುದ್ದಿ
Show comments