Webdunia - Bharat's app for daily news and videos

Install App

ಕತ್ತು ಕೊಯ್ದು ಮಹಿಳೆಯ ಬರ್ಭರ ಹತ್ಯೆ

Webdunia
ಸೋಮವಾರ, 2 ಮಾರ್ಚ್ 2015 (17:22 IST)
ಮಹಿಳೆಯೋರ್ವಳನ್ನು ಪರಿಚಯಸ್ಥ ವ್ಯಕ್ತಿಯೇ ಕತ್ತು ಕೊಯ್ದು ಬರ್ಭರವಾಗಿ ಹತ್ಯೆಗೈದಿರುವ ಘಟನೆ ನಗರದ ದೊಮ್ಮಲೂರಿನ 1ನೇ ಮುಖ್ಯರಸ್ತೆಯ ಮನೆಯೊಂದರಲ್ಲಿ ಇಂದು ನಡೆದಿದೆ. 
 
ಹತ್ಯೆಗೀಡಾದ ಮಹಿಳೆಯನ್ನು ಒಡಿಶಾ ಮೂಲದ ಪ್ರಾಚಿ(35) ಎನ್ನಲಾಗಿದ್ದು, ಖಾಸಗಿ ಕಂಪನಿಯ ಉದ್ಯೋಗಿ ಎಂದು ಹೇಳಲಾಗಿದೆ. ಈಕೆಯನ್ನು ಕತ್ತು ಕೊಯ್ದು ಹತ್ಯೆಗೈದ ಆರೋಪಿಯನ್ನು ಬಸುದೇವ್(38) ಎನ್ನಲಾಗಿದ್ದು, ಈತ ಪ್ರಾಚಿ ಪತಿಯ ಆಪ್ತ ಸ್ನೇಹಿತ ಎಂದು ಹೇಳಲಾಗುತ್ತಿದೆ. 
 
ಮಹಿಳೆಯ ಪತಿ ಡೆಬಾಸ್ಟಿಯನ್ ದಾಸ್ ಮನೆಯಲ್ಲಿ ಇಲ್ಲದ ಮಾಹಿತಿಯನ್ನು ತಿಳಿದ ಆರೋಪಿ ಬಸುದೇವ್, ಇಂದು ಮನೆಗೆ ಆಗಮಿಸಿದ್ದ. ಈ ವೇಳೆ, ತನ್ನ ಬಳಿ ಇದ್ದ ಚಾಕುವಿನಿಂದ ಆಕೆಯ ಕತ್ತು ಕೊಯ್ದು ಹತ್ಯೆಗೈದಿದ್ದಾನೆ. ಹತ್ಯೆ ವೇಳೆ ಮಹಿಳೆ ಚೀರಿಕೊಂಡದ್ದರಿಂದ ಕೂಡಲೇ ಮನೆಯ ಮಾಲೀಕೆ ದಾವಿಸಿ ವೀಕ್ಷಿಸಿದ್ದಾರೆ. ಆಗ ಆರೋಪಿ ಕೈಯ್ಯಲ್ಲಿ ಚಾಕು ಇರುವುದನ್ನು ಕಂಡ ಮಾಲೀಕರು, ಜೋರಾಗಿ ಚೀರಿಕೊಂಡಿದ್ದಾರೆ. ಬಳಿಕ ಸ್ಥಳೀಯರ ನೆರವಿನಿಂದ ಆರೋಪಿಯನ್ನು ಮನೆಯಲ್ಲಿಯೇ ಕೂಡಿ ಹಾಕಿ ಪೊಲೀಸರಿಗೆ ಒಪ್ಪಿಸಲಾಗಿದೆ. ಮಹಿಳೆಯ ಕುಟುಂಬದೊಂದಿಗೆ ಆಪ್ತವಾಗಿದ್ದ ಆರೋಪಿ, ಏಕೆ ಹತ್ಯೆಗೈದ ಎಂಬುದು ತಿಳಿದು ಬಂದಿಲ್ಲ. ಆದರೆ ಇದ್ದಕ್ಕಿದ್ದಂತೆ ಈ ಹೀನ ಕೃತ್ಯ ಎಸಗಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. 
 
ಇನ್ನು ಆರೋಪಿಯನ್ನು ನಗರದ ಹಲಸೂರು ಪೊಲೀಸರು ಈಗಾಗಲೇ ಬಂಧಿಸಿದ್ದು, ತನಿಖೆಗೊಳಪಡಿಸಿದ್ದಾರೆ. 
 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments