ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ನವೆಂಬರ್ 22ರಂದು ಗೋಪಾಲಕೃಷ್ಣ ಎಂಬವರ ಕೊಲೆಯಾಗಿತ್ತು. ಗೋಪಾಲ್ಕೃಷ್ಣ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು ಬಡ್ಡಿ ವ್ಯಾಪಾರ ಕೂಡ ಮಾಡುತ್ತಿದ್ದರು.
ಕುಮಾರಸ್ವಾಮಿ ಲೇಔಟ್ ಪೊಲೀಸರು ಪ್ರಸಾದಿ, ವಡ್ಡಾನಾಗ, ಪ್ರಶಾಂತ ಮುನಿರತ್ನ ಎಂಬ ಹಂತಕರನ್ನು ಈ ಹತ್ಯೆಗೆ ಸಂಬಂಧಿಸಿದಂತೆ ಬಂಧಿಸಿದ್ದಾರೆ. ಗೋಪಾಲ್ಕೃಷ್ಣ ತಮ್ಮ ಸ್ನೇಹಿತ ಗೋಪಾಲ್ ಜೊತೆ ರಸ್ತೆಯಲ್ಲಿ ಬರುವಾಗ ನಾಲ್ವರು ಹಂತಕರು ಮಚ್ಚು, ಲಾಂಗ್ಗಳಿಂದ ಹಲ್ಲೆ ಮಾಡಿದ್ದರು.
ಅದೃಷ್ಟವಶಾತ್ ಸ್ನೇಹಿತ ಗೋಪಾಲ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಾವು ಲಾಭಕ್ಕಾಗಿ ಈ ಕೊಲೆ ಮಾಡಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.