Webdunia - Bharat's app for daily news and videos

Install App

ಸಾವಿಗೆ ಕಾರಣವಾದ ಫೇಸ್‌ಬುಕ್ ಸ್ನೇಹ

Webdunia
ಸೋಮವಾರ, 1 ಆಗಸ್ಟ್ 2016 (07:35 IST)
ಫೇಸ್‌ಬುಕ್‌ನಲ್ಲಿ ಪರಿಚಯವಾದ ಯುವತಿಯ ಜತೆ  ದೂರವಾಣಿ ಸಂಭಾಷಣೆ ನಡೆಸುತ್ತಿದ್ದ ಯುವಕನನ್ನು ಯುವತಿಯ ಸ್ನೇಹಿತ ಕೊಲೆ ಮಾಡಿ ಹೂತಿಟ್ಟ ಹೇಯ ಘಟನೆ ವಿಲ್ಸನ್ ಗಾರ್ಡನ್ ‌ನಲ್ಲಿ ನಡೆದಿದೆ.

ಚನ್ನಪಟ್ಟಣ ಮೂಲದ ಯೋಗೀಶ್( 27)ಕೊಲೆಯಾದ ದುರ್ದೈವಿಯಾಗಿದ್ದು ಆರೋಪಿಯನ್ನು ಜಯನಗರದ ಪ್ರತಾಪ್(27) ಎಂದು ಗುರುತಿಸಲಾಗಿದೆ.

ಜಯನಗರದ 6 ನೇ ಬ್ಲಾಕ್‌ನಲ್ಲಿರುವ ಅಕ್ಕನ ಮನೆಯಲ್ಲಿ ವಾಸವಾಗಿದ್ದ ಯೋಗೀಶ್ ರಿಯಲ್ ಎಸ್ಟೇಟ್ ಏಜೆಂಟ್ ಆಗಿ ಕೆಲಸ  ಮಾಡುತ್ತಿದ್ದ. ಜುಲೈ 19 ರಂದು ಮನೆಯಿಂದ ಹೊರಗೆ ಹೋದವನು ಹಿಂತಿರುಗಿ ಬಂದಿರಲಿಲ್ಲ. ಈ ಸಂಬಂಧ ಜುಲೈ 21 ರಂದು ಪ್ರಕರಣ ದಾಖಲಾಗಿತ್ತು.

ತನಿಖೆ ಕೈಗೊಂಡ ಪೊಲೀಸರು ಯೋಗೀಶ್ ಸಾವಿನ ರಹಸ್ಯವನ್ನು ಬಯಲು ಮಾಡುವಲ್ಲಿ ಯಶ ಕಂಡಿದ್ದಾರೆ.

ಯೋಗೀಶ್ ಯುವತಿಯೊಬ್ಬಳ ಜತೆ ಫೇಸ್‌ಬುಕ್‌ನಲ್ಲಿ ಚಾಟಿಂಗ್, ಫೋನ್ ಸಂಭಾಷಣೆ ನಡೆಸುತ್ತಿದ್ದ. ಇದು ಆಕೆಯ ಸ್ನೇಹಿತ ಪ್ರತಾಪ್‌ನ ಕೋಪಕ್ಕೆ ಕಾರಣವಾಗಿದೆ. ನನ್ನ ಹುಡುಗಿಯ ಸುದ್ದಿಗೆ ಬರಬೇಡ ಎಂದು ಎಷ್ಟು ಬಾರಿ ಹೇಳಿದರೂ ಕೇಳದ ಯೋಗೀಶ್‌ನ್ನು ಕೊಲ್ಲಲು ನಿರ್ಧರಿಸಿದ ಪ್ರತಾಪ್ ಆತನನ್ನು ಅಪಹರಿಸಿ ಮಾಗಡಿ ತಾಲ್ಲೂಕಿನ ಅತ್ತಿಗೆರೆ ಗ್ರಾಮದಲ್ಲಿರುವ ತೋಟದ ಮನೆಗೆ ಕರೆದೊಯ್ದು ಸ್ನೇಹಿತರ ಜತೆ ಸೇರಿ ಕೊಲೆ ಮಾಡಿ ಶವವನ್ನು ಹೂತಿಟ್ಟಿದ್ದಾನೆ.

ಮುಖ್ಯ ಆರೋಪಿ ಪ್ರತಾಪ್‌ನನ್ನು ಬಂಧಿಸಿರುವ ಪೊಲೀಸರು ಆತನ ಸ್ನೇಹಿತರಿಗಾಗಿ ಶೋಧ ನಡೆಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಂಸತ್‌ ಕ್ಯಾಂಟೀನ್‌ನಲ್ಲಿ ಪೌಷ್ಟಿಕಾಂಶಯುಕ್ತ ಆಹಾರ, ಮೆನುವಿನಲ್ಲಿ ಭಾರೀ ಬದಲಾವಣೆ ತಂದ ಸ್ಪೀಕರ್‌

ಒಡಿಶಾ, ಶಿಕ್ಷಕನ ಲೈಂಗಿಕ ಕಿರುಕುಳಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ, ಪ್ರತಿಭಟನಕಾರರನ್ನು ಚದುರಿಸಲು ಜಲಫಿರಂಗಿ ಪ್ರಯೋಗ

ಪ್ರಧಾನಿ ಮೋದಿ ವಾರಕ್ಕೆ 100 ಗಂಟೆ ಕೆಲಸ ಮಾಡುವ ಏಕೈಕ ವ್ಯಕ್ತಿ: ನಾರಾಯಣ ಮೂರ್ತಿ

Karnataka Rain Alert: ಮುಂದಿನ 7 ದಿನಗಳ ಕಾಲ ಈ ಪ್ರದೇಶದಲ್ಲಿ ಭಾರೀ ಮಳೆ

ಬಿಜೆಪಿ, ಜೆಡಿಎಸ್ ಬೆಂಗಳೂರಿನ ಪರಿಸರ ಹಾಳು ಮಾಡುತ್ತಿದೆ: ರಣದೀಪ್ ಸುರ್ಜೇವಾಲ

ಮುಂದಿನ ಸುದ್ದಿ
Show comments