Webdunia - Bharat's app for daily news and videos

Install App

ವಿಧಾನ ಸೌಧದಲ್ಲಿ ಇಲಿಗಳ ದರ್ಬಾರ್!

Webdunia
ಶನಿವಾರ, 22 ಅಕ್ಟೋಬರ್ 2016 (08:20 IST)
ಬೆಂಗಳೂರು: ರಾಜ್ಯದ ಶಕ್ತಿ ಕೇಂದ್ರವಾದ ವಿಧಾನ ಸೌಧದಲ್ಲಿ ಹೇಗೋ ಒಂದು ಜೋಡಿ ಇಲಿ ಒಳ ಸೇರಿಕೊಂಡುಬಿಟ್ಟಿವೆ. ಆ ಜೋಡಿ ಇಲಿ ಅಲ್ಲಿ ತನ್ನದಾದ ಒಂದು ಪುಟ್ಟ ಸಂಸಾರವನ್ನು ಸಹ ಮಾಡಿಕೊಂಡಿ ಬಿಟ್ಟಿದೆ. ಅವುಗಳ ಉಪಟಳ ದಿನದಿಂದ ದಿನಕ್ಕೆ ಹೆಚ್ಚುತ್ತಿರುವುದನ್ನು ಗಮನಿಸಿದ ಸರಕಾರ, ಶಕ್ತಿಸೌಧದಿಂದಲೇ ಓಡಿಸಲೆಂದು ಸರಿಸುಮಾರು 14 ಲಕ್ಷ ರು.ವೆಚ್ಚ ಮಾಡಿದೆ. ಆದರೂ ಇಲಿಗಳನ್ನು ಅಲ್ಲಿಂದ ಓಡಿಸಲು ಆಗಿಲ್ಲ ಎನ್ನುವುದು ಸೋಜಿಗ!
 

 
ಇಲಿ ಹಿಡಿಯೋಕೆ ಇಷ್ಟೆಲ್ಲಾ ಖರ್ಚ್ ಮಾಡ್ತಾರಾ ಎಂದು ನೀವು ಹುಬ್ಬೇರಿಸಬಹುದು. ಹೌದು ಕಣ್ರೀ... ಆ ಇಲಿ ಹೊಕ್ಕಿರುವುದು ಯಾವುದೋ ಒಂದು ಸಣ್ಣ-ಪುಟ್ಟ ಬಿಡಾರದಲ್ಲಲ್ಲ. ರಾಜ್ಯದ ಆಡಳಿತ ಕೇಂದ್ರವಾದ ವಿಧಾನ ಸೌಧ ಹಾಗೂ ವಿಕಾಸ ಸೌಧದಲ್ಲಿ. ಮೂರು ವರ್ಷಗಳಿಂದ ರಾಜ್ಯ ಸರಕಾರ ಆ ಇಲಿಗಳನ್ನು ಓಡಿಸಲೆಂದು 14 ಲಕ್ಷ ರು. ವೆಚ್ಚಮಾಡಿದೆ. 2013/14 ರಲ್ಲಿ 3.49 ಲಕ್ಷ ರು., 2014/15 ರಲ್ಲಿ 4.96 ಲಕ್ಷ ಖರ್ಚ್ ಮಾಡಿದ್ದರೆ, 2015/16ನೇ ಸಾಲಿನಲ್ಲಿ 4.96 ಲಕ್ಷ ರು. ಖರ್ಚ್ ಮಾಡಿದೆ. ಈ ಮಾಹಿತಿ ಸಾಮಾಜಿಕ ಕಾರ್ಯಕರ್ತ ಮರಿಲಿಂಗೇಗೌಡ ಮಾಲೀಪಾಟೀಲ್ ಎಂಬವರು ಆರ್.ಟಿ.ಐ ಅಡಿ ಪಡೆದ ಮಾಹಿತಿಯಲ್ಲಿ ಬಹಿರಂಗವಾಗಿದೆ.
 
ವಿಧಾನಸೌಧದಲ್ಲಿ ಇಲಿಗಳು ಬೀಡು ಬಿಟ್ಟಿವೆ ಎನ್ನುವುದು ಅಲ್ಲಿಯ ಅಧಿಕಾರಿಗಳಲ್ಲಿ ಆತಂಕ ಸೃಷ್ಟಿಸಿದ್ದವು. ಅತ್ಯಮೂಲ್ಯ ಕಾಗದ ಪತ್ರಗಳನ್ನು ಎಲ್ಲಿಯಾದರೂ ತಿಂದು ಬಿಟ್ಟರೆ ಎನ್ನುವ ಮುಂಜಾಗೃತೆಯಿಂದ, ಗಂಗಾ ಫೆಸಿಲಿಟೀಸ್ ಅಂಡ್ ಮ್ಯಾನೇಜ್ಮೆಂಟ್ ಸರ್ವಿಸಸ್ ಸಂಸ್ಥೆಗೆ ಇಲಿ ಹಿಡಿಯುವ ಜವಾಬ್ದಾರಿ ನೀಡಲಾಗಿತ್ತು. ಅಷ್ಟೊಂದು ಲಕ್ಷ ಲಕ್ಷ ಹಣ ವೆಚ್ಚ ಮಾಡಿದ್ದರೂ, ಇಲಿ ಮಾತ್ರ ಅಲ್ಲಿಂದ ಓಡಿ ಹೋಗಿಲ್ಲ. ಕೆಲವು ತಿಂಗಳ ಹಿಂದೆ ವಿಧಾನಸೌಧದ ಸಭಾಂಗಣದಲ್ಲಿ ಇಲಿಯೊಂದು ಸತ್ತು ಬಿದ್ದಿತ್ತು. ವಿಶೇಷ ಅಂದ್ರೆ, ಮೂರು ವರ್ಷದಿಂದ ಇಲಿ ಓಡಿಸಲಾಗದಿದ್ದರೂ ಅದೇ ಕಂಪನಿಗೆ ಮತ್ತೆ ಮತ್ತೆ ಟೆಂಡರ್ ನೀಡುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಏರ್‌ ಇಂಡಿಯಾ ವಿಮಾನ ದುರಂತದ ಬಳಿಕ 80 ವಿಮಾನ ಹಾರಾಟಗಳ ರದ್ದು

ಕರುಣೆಯಿಲ್ಲದೆ ಯುದ್ಧ ಮುಂದುವರೆಯುತ್ತದೆ: ಟ್ರಂಪ್‌ ವಾರ್ನಿಂಗ್‌ಗೆ ಇರಾನ್‌ ಡೊಂಟ್ ಕ್ಯಾರೇ

ಲ್ಯಾಂಡ್ ಆದ ಬಳಿಕ ತಾಂತ್ರಿಕ ದೋಷದಿಂದ 40ನಿಮಿಷ ವಿಮಾನದೊಳಗೆ ಸಿಲುಕಿಕೊಂಡ ಇಂಡಿಗೋ ಪ್ರಯಾಣಿಕರು

Ahmedabad Plane Crash: 190 ಶವಗಳ ಗುರುತು ಪತ್ತೆ, 159 ಮಂದಿ ಮೃತದೇಹ ಕುಟುಂಬಕ್ಕೆ ಹಸ್ತಾಂತರ

ಮುಖ್ಯಮಂತ್ರಿ ಕುರ್ಚಿ ಆಸೆಯನ್ನು ಮತ್ತೆ ಪರೋಕ್ಷವಾಗಿ ಬಿಚ್ಚಿಟ್ಟ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌

ಮುಂದಿನ ಸುದ್ದಿ
Show comments