Webdunia - Bharat's app for daily news and videos

Install App

ಮದುವೆಯಾಗುವ ನಾಟಕ: ಯುವಕನ ವಿರುದ್ಧ ಅತ್ಯಾಚಾರದ ದೂರು

Webdunia
ಸೋಮವಾರ, 21 ಜುಲೈ 2014 (14:51 IST)
ಬೆಂಗಳೂರಿನ ಟಿಸಿಎಸ್ ಉದ್ಯೋಗಿ ಶಮೀಮ್ ರಾಜ್ ನದಾಫ್ ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಮಾಡಿದ ಘಟನೆ ವರದಿಯಾಗಿದೆ. ದಾವಣಗೆರೆಯ ನಿವೃತ್ತ ಪೊಲೀಸ್ ಅಧಿಕಾರಿ ಪುತ್ರ ನದಾಫ್‌ಗೆ ಶಾದಿ ಡಾಟ್ ಕಾಂನಲ್ಲಿ ಯುವತಿಗೆ ಪರಿಚಯವಾಗಿತ್ತು.  ಡ್ರಾಪ್ ಕೊಡುವ ನೆಪದಲ್ಲಿ  ಎಂಜಿನಿಯರಿಂಗ್ ಓದುತ್ತಿದ್ದ ವಿದ್ಯಾರ್ಥಿನಿಯನ್ನು ಕರೆದುಕೊಂಡು ಹೋಗಿ ಅವಳ ಜೊತೆ ಪ್ರೀತಿಯನ್ನು ಬೆಳೆಸಿದ.

ನಂತರ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ಕೂಡ ಮಾಡಿದ್ದ.  ಪ್ರೀತಿಯ ನಾಟಕವಾಡಿ ಅತ್ಯಾಚಾರ ಮಾಡಿದ ಯುವಕ ಬಳಿಕ ಮದುವೆಯಾಗುವುದಕ್ಕೆ ನಿರಾಕರಿಸಿ ಯುವತಿಯನ್ನು ಬೀದಿಗೆ ತಳ್ಳಿದ.. ತೀವ್ರ ನೊಂದ ಯುವತಿ ಈ ಕುರಿತು ಕೇಸ್ ರಿಜಸ್ಟರ್ ಮಾಡಲು ಹೋದಾಗ,  ಯುವಕ ಮತ್ತು ಅವನ ಪೋಷಕರು ಅಂಗಲಾಚಿಕೊಂಡು ಕೇಸ್ ಹಾಕಬೇಡಿ, ಮದುವೆ ಮಾಡಿಕೊಳ್ಳುವುದಾಗಿ ಭರವಸೆ ನೀಡಿದರು.

 ನಮ್ಮ ಮಗನಿಂದ ತಪ್ಪಾಗಿದೆ. ಮದುವೆ ಮಾಡಿಸ್ತೀವಿ ಎಂದು ಹೇಳಿ ಜೂ. 3ರಂದು ವಸಂತನಗರದ ಮಸೀದಿಯಲ್ಲಿ ಇಬ್ಬರಿಗೂ ನಿಖಾ ಮಾಡಿಸಿದ್ದರು.  ವರದಕ್ಷಿಣೆ ಇಲ್ಲದೇ ಮದುವೆಯಾಗ್ತಿದ್ದೇವೆ ಎಂದು ಗುತ್ತಿಗೆ ಒಪ್ಪಂದದ ಮೇಲೆ ಸಹಿ ಮಾಡಿಸಿಕೊಂಡರು.ನಂತರ ಮಸೀದಿಯಿಂದ ಹೊರಗೆ ಬಂದ ಮೇಲೆ ಉಲ್ಟಾ ಹೊಡೆದರು.

 'ನೀನು ರೇಪ್ ಕೇಸ್ ಹಾಕಲು ಹೋಗಿದ್ದೀಯಾ, ಈಗ ಏನು ಮಾಡುತ್ತೀಯೋ ಮಾಡ್ಕೋ ಹೋಗು' ಎಂದು ಹೊರಗೆ ಬಂದು ಹೇಳಿದಾಗ ಯುವತಿಗೆ ಶಾಕ್ ಹೊಡೆದ ಹಾಗಾಯಿತು. ಈಗ ಯುವತಿಗೆ  ಬೆದರಿಕೆ ಕರೆಗಳು ಬರುತ್ತಿವೆ. ಯುವತಿಗೆ ಈಗ ದಿಕ್ಕೇ ತೋಚದಂತಾಗಿದ್ದು,  ಟಿವಿ ವಾಹಿನಿಯ ಮೊರೆ ಹೋಗಿ ತಮ್ಮ ಕಥೆಯನ್ನು ಹೇಳಿಕೊಂಡಿದ್ದಾರೆ. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments