Select Your Language

Notifications

webdunia
webdunia
webdunia
webdunia

ಅತ್ಯಾಚಾರಕ್ಕೆ ಯತ್ನಿಸಿದ ಕಳ್ಳ: ಕಂಬಕ್ಕೆ ಕಟ್ಟಿ ಗೂಸಾ ನೀಡಿದ ಸಾರ್ವಜನಿಕರು

ಅತ್ಯಾಚಾರಕ್ಕೆ ಯತ್ನಿಸಿದ ಕಳ್ಳ: ಕಂಬಕ್ಕೆ ಕಟ್ಟಿ ಗೂಸಾ ನೀಡಿದ ಸಾರ್ವಜನಿಕರು
ಉಡುಪಿ , ಮಂಗಳವಾರ, 4 ಆಗಸ್ಟ್ 2015 (11:53 IST)
ಕಳ್ಳತನ ಮಾಡಿದ್ದಲ್ಲದೆ ಯುವತಿಯೋರ್ವಳ ಮೇಲೆ ಅತ್ಯಾಚಾರಕ್ಕೆತ್ನಿಸಿದ ಯುವಕನೋರ್ವನನ್ನು ಸಾರ್ವಜನಿಕರೇ ಹಿಡಿದು ಸಾರ್ವಜನಿಕವಾಗಿ ಮನ ಬಂದಂತೆ ಥಳಿಸಿರುವ ಘಟನೆ ಜಿಲ್ಲೆಯ ಕಾರ್ಕಳ ತಾಲೂಕಿನ ಹೊಸ್ಮಾರುವು ಎಂಬ ಗ್ರಾಮದಲ್ಲಿ ನಡೆದಿದೆ.
 
ಥಳಿತಕ್ಕೊಳಗಾದ ಯುಕನನ್ನು ಇದೇ ಗ್ರಾಮದ ನಿವಾಸಿ ಸತೀಶ್(19) ಎಂದು ಹೇಳಲಾಗಿದ್ದು, ಈತನೇ ಧರ್ಮದೇಟಿಗೆ ಗುರಿಯಾದ ಆರೋಪಿಯಾಗಿದ್ದಾನೆ. ನಿರುದ್ಯೋಗಿಯಾಗಿದ್ದು, ಆಗಾಗ ಕೂಲಿ ಕಾರ್ಮಿಕನಾಗಿ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದೆ. 
 
ಪ್ರಕರಣದ ಹಿನ್ನೆಲೆ: ಗ್ರಾಮದಲ್ಲಿನ ಸ್ಟುಡಿಯೋವೊಂದರಲ್ಲಿ ಯುವತಿಯೋರ್ವಳು ಕೆಲಸ ನಿರ್ವಹಿಸುತ್ತಿದ್ದಳು. ಈ ವೇಳೆ ಆಕೆಯ ಬಳಿ ಸುಳಿದ ಆರೋಪಿ, ಆಕೆಯ ಕತ್ತಿನಲ್ಲಿದ್ದ ಚಿನ್ನದ ಸರಕ್ಕೆ ಕೈ ಹಾಕಿದ್ದಾನೆ. ಅಲ್ಲದೆ ಅತ್ಯಾಚಾರಕ್ಕೂ ಯತ್ನಿಸಿದ್ದಾನೆ. ಪರಿಣಾಮ ಆಕೆ ಜೊರಾಗಿ ಕಿರುಚಿಕೊಂಡಿದ್ದಾಳೆ. ಬಳಿಕ ಸ್ಥಳಕ್ಕೆ ಧಾವಿಸಿದ ಸ್ಥಳೀಯರು, ಆತನನ್ನು ಹಿಡಿದು ಕಂಬಕ್ಕೆ ಕಟ್ಟಿ ಹಾಕಿ ಮನ ಬಂದಂತೆ ಥಳಿಸಿದ್ದಾರೆ. 
 
ಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದಿದ್ದು, ತನಿಖೆ ನಡೆಸುತ್ತಿದ್ದಾರೆ. 

Share this Story:

Follow Webdunia kannada