Select Your Language

Notifications

webdunia
webdunia
webdunia
webdunia

ಅರಮನೆ ಅಂಗಳದಿಂದ ದಸರಾ ಆನೆಗಳಿಗೆ ಗೇಟ್‌ಪಾಸ್

ಅರಮನೆ ಅಂಗಳದಿಂದ ದಸರಾ ಆನೆಗಳಿಗೆ ಗೇಟ್‌ಪಾಸ್
ಮೈಸೂರು , ಭಾನುವಾರ, 31 ಆಗಸ್ಟ್ 2014 (12:17 IST)
ರಾಣಿ ಪ್ರಮೋದಾದೇವಿ ಅರಮನೆಯ ಕುಟುಂಬಕ್ಕೆ ಸೇರಿದ ಅಂಗಳದಲ್ಲಿ ಆನೆಗಳನ್ನು ಕಟ್ಟಬೇಡಿ ಎಂದು ತಾಕೀತು ಮಾಡಿದ್ದಾರೆ.  ಮಾವುತರು ಮತ್ತು ಕಾವಾಡಿಗರು ವಾಸಿಸಲು ಟೆಂಟ್‌ಗಳನ್ನು ನಿರ್ಮಿಸಲಾಗುತ್ತಿತ್ತು. ಆದರೆ ರಾಣಿ ಪ್ರಮೋದಾದೇವಿ ವಿರೋಧಿಸಿದ್ದರಿಂದ ಆನೆಗಳನ್ನು ಅರಮನೆಯ ಜಯಮಾರ್ತಾಂಡ ದ್ವಾರದ ದೋಬಿಘಾಟ್ ಬಳಿ ಕಟ್ಟಲು ಸಿದ್ಧತೆ ನಡೆಸಲಾಗುತ್ತದೆ.

ಅರಮನೆಗೆ ಸೇರಿದ ಆಸ್ತಿ ವಿಚಾರವಾಗಿ ಸರ್ಕಾರ ಮತ್ತು ಒಡೆಯರ್ ನಡುವೆ ತಿಕ್ಕಾಟವಾಗಿತ್ತು. ಕೆಲ ದಿನಗಳ ಹಿಂದೆ ಸುದ್ದಿಗೋಷ್ಠಿ ನಡೆಸಿ ರಾಣಿ ಪ್ರಮೋದಾ ದೇವಿ ಆಕ್ರೋಶ ಹೊರಹಾಕಿದ್ದರು. ಈ ವ್ಯಾಜ್ಯಗಳಿಂದ ನೊಂದಿದ್ದು, ಮಾತುಕತೆ ಮೂಲಕ ಬಗೆಹರಿಸಬಹುದು ಎಂದು ಪ್ರಮೋದಾದೇವಿ ಹೇಳಿದ್ದರು.

ಈಗ ಅರಮನೆ ಮತ್ತು ಸರ್ಕಾರದ ನಡುವೆ ಮುಸುಕಿನ ಗುದ್ದಾಟವು ಆನೆಗಳ ಸಂಕಷ್ಟಕ್ಕೆ ಕಾರಣವಾಗಿದೆ. 

Share this Story:

Follow Webdunia kannada