ವಿವಾದಾತ್ಮಕ ಸ್ವಯಂಘೋಷಿತ ದೇವಮಾನ ಸಂತ ರಾಮ್ಪಾಲ್ ಈಗ ಕಸ್ಟಡಿ ಪಾಲಾಗಿದ್ದಾರೆ. ಜೈಲ್ ಲಾಕ್ಅಪ್ನಲ್ಲಿ ಅವರು ನಿದ್ರಾರಹಿತ ರಾತ್ರಿಗಳನ್ನು ಕಳೆಯುತ್ತಿದ್ದಾರಂತೆ. ಹಿಸಾರ್ ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಸೆಲ್ನಲ್ಲಿ ಅವರು ಅತ್ತಿಂದಿತ್ತ, ಇತ್ತಿಂದಿತ್ತ ಓಡಾಡುತ್ತಾರೆ. ಅವರು ನಿದ್ರಾಹೀನತೆ, ಅಸಿಡಿಟಿ ಮತ್ತು ಕೆಮ್ಮಿನಿಂದ ಬಳಲುತ್ತಿದ್ದಾರೆಂದು ವೈದ್ಯಕೀಯ ವರದಿ ತಿಳಿಸಿದೆ.
ಸ್ಥಳೀಯ ಕೋರ್ಟೊಂದು ಬರ್ವಾಲಾದಲ್ಲಿ ದೇಶದ್ರೋಹದ ಆಪಾದನೆ ಮೇಲೆ ಐದು ದಿನಗಳ ಪೊಲೀಸ್ ರಿಮ್ಯಾಂಡ್ಗೆ ಒಳಪಡಿಸಿದೆ. ತಮಗೆ ದೈಹಿಕ ಹಿಂಸೆ ನೀಡಬಹುದೆಂಬ ಭಯದಿಂದ ರಾಮ್ಪಾಲ್ ಅವರಿಗೆ ಸಣ್ಣ ಮಟ್ಟಿಗೆ ಖಿನ್ನತೆ ಆವರಿಸಿದೆ.
ರಾಮ್ಪಾಲ್ ವಿರುದ್ಧ ದೇಶದ್ರೋಹ, ಕೊಲೆ ಯತ್ನ, ಅಕ್ರಮ ಬಂಧನ, ಗಲಭೆ ಮತ್ತಿತರ ಆರೋಪಗಳನ್ನು ಹೊರಿಸಲಾಗಿದೆ. ಪೊಲೀಸರು ಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್ನಲ್ಲಿ ಹಾಜರುಪಡಿಸಿದ ನಂತರ ಐದು ದಿನಗಳವರೆಗೆ ಪೊಲೀಸ್ ಕಸ್ಟಡಿಗೆ ಹಾಕಲಾಗಿದೆ.