Webdunia - Bharat's app for daily news and videos

Install App

ರಾಜಯೋಗೀಂದ್ರ ಶ್ರೀಗಳ ಪೀಠತ್ಯಾಗಕ್ಕೆ ಭಕ್ತರ ವಿರೋಧ

Webdunia
ಶನಿವಾರ, 22 ನವೆಂಬರ್ 2014 (19:16 IST)
ಹುಬ್ಬಳ್ಳಿ ಮೂರು ಸಾವಿರ ಮಠದ ಉತ್ತರಾಧಿಕಾರಿ ನೇಮಕದ ವಿವಾದಕ್ಕೆ ಸಂಬಂಧಿಸಿದಂತೆ ಮನನೊಂದು ರಾಜಯೋಗೀಂದ್ರ ಶ್ರೀಗಳು ಪೀಠ ತ್ಯಾಗ ಮಾಡಿದ ಘಟನೆ ಇಂದು ನಡೆಯಿತು.ಗುರುಸಿದ್ದೇಶ್ವರ ಗದ್ದುಗೆಗೆ ನಮಸ್ಕರಿಸಿ ಮಠದಿಂದ ಕಾರಿನತ್ತ ತೆರಳಿ ಕಾರಿನಲ್ಲೇ ಸ್ವಾಮೀಜಿ ಕುಳಿತಿದ್ದರು.

ಕಾರಿನ ಎದುರಿಗೆ ನಿಂತರ ಭಕ್ತರು ಮಠ ಬಿಟ್ಟು ತೆರಳದಂತೆ ಒತ್ತಾಯಿಸಿದರು. ಮಠ ಬಿಟ್ಟು ಹೋದರೆ ಆತ್ಮಾಹುತಿ ಮಾಡಿಕೊಳ್ಳುವುದಾಗಿ ಹೇಳಿದರು.

 ಕೆಲವು ಭಕ್ತರು ಭಾವುಕರಾಗಿ ಕಣ್ಣೀರಿಟ್ಟರು. ಸ್ವಾಮೀಜಿಗಳ ಮನವೊಲಿಗೆ ಭಕ್ತರು ಹರಸಾಹಸ ಮಾಡಿದರು. ಭಕ್ತರ ಒತ್ತಾಯದ ಮೇರೆಗೆ ಸ್ವಾಮೀಜಿಗಳು ಮಠಕ್ಕೆ ವಾಪಸಾದರು. ಆದರೆ ಪೀಠತ್ಯಾಗ ಮಾಡುವ ನಿರ್ಧಾರವನ್ನು ಮಾತ್ರ ಸ್ವಾಮೀಜಿ ಇನ್ನೂ ಹಿಂತೆಗೆದುಕೊಂಡಿಲ್ಲ. 

ಲಿಂಗಾರೇಶ್ವರ ಶ್ರೀಗಳನ್ನು ಉತ್ತರಾಧಿಕಾರಿಯಾಗಿ ನೇಮಿಸಬೇಕೆಂಬ ರಾಜಯೋಗೀಂದ್ರ ಶ್ರೀಗಳ ವಾದವನ್ನು ಮಠದ ಕೆಲವರು ಒಪ್ಪದಿರುವುದರಿಂದ ಶ್ರೀಗಳು ಮನನೊಂದಿದ್ದರು. 

 ಮೂರುಸಾವಿರ ಮಠದ ಉತ್ತರಾಧಿಕಾರಿ ನೇಮಕಕ್ಕೆ ಸಂಬಂಧಿಸಿದಂತೆ ಸಭೆಯೊಂದನ್ನು ನಡೆಸುವ  ರಾಜಯೋಗೀಂದ್ರ ಶ್ರೀಗಳ ನಿರ್ಧಾರವನ್ನು ಮಠದ ಕೆಲವು ಸದಸ್ಯರು ವಿರೋಧಿಸಿದರು. ಇವೆಲ್ಲಾ ಕಾರಣಗಳಿಂದ ಮನನೊಂದ ಶ್ರೀಗಳು ಪೀಠತ್ಯಾಗದ ನಿರ್ಧಾರವನ್ನು ಕೈಗೊಂಡರು. 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

Show comments