ಬರಗಾಲದಿಂದ ಬರಗೆಟ್ಟ ಬೆಂಗಳೂರಿಗೆ ಮಳೆಯ ಭರವಸೆ

Krishnaveni K
ಮಂಗಳವಾರ, 16 ಏಪ್ರಿಲ್ 2024 (09:56 IST)
ಬೆಂಗಳೂರು: ಕಳೆದ ಮೂರು-ನಾಲ್ಕು ತಿಂಗಳಿನಿಂದ ನೀರಿಲ್ಲದೇ ಬೆಂಗಳೂರಿಗರು ಬೇಸತ್ತು ಹೋಗಿದ್ದಾರೆ. ನೀರಿಲ್ಲದೇ ಜನ ಜೀವನವೇ ಬದಲಾಗಿದೆ.

ಆದರೆ ಇದೀಗ ಹವಾಮಾನ ಇಲಾಖೆಯ ವರದಿ ಕೊಂಚ ಸಮಾಧಾನ ಮೂಡಿಸುವಂತಿದೆ. ಈ ಬಾರಿ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ. ಈ ಬಾರಿ ನೀರಿಲ್ಲದೇ ಬೇಸಿಗೆ ತುಸು ದೀರ್ಘವೆನಿಸಿತ್ತು. ವಿಪರೀತ ಉರಿಬಿಸಿಲು ಮನುಷ್ಯರು ಮಾತ್ರವಲ್ಲ, ಸಸ್ಯ, ಪ್ರಾಣಿ ಸಂಕುಲಗಳಿಗೂ ಭಾರೀ ತೊಂದರೆಯಾಗಿದೆ.

ಕಳೆದ ಬಾರಿ ವಾಡಿಕೆಯಂತೆ ಮಳೆಯಾಗದಿರುವುದೇ ನೀರಿನ ಕೊರತೆಗೆ ಕಾರಣ. ಅದರಲ್ಲೂ ಬೆಂಗಳೂರಿನಲ್ಲಿ ಮಳೆಯಾಗಿದ್ದೇ ಕಡಿಮೆ. ಈ ಬಾರಿ ಜೂನ್-ಸೆಪ್ಟೆಂಬರ್ ಅವಧಿಯಲ್ಲಿ ಸರಾಸರಿ ವಾಡಿಕೆ ಮಳೆ ಪ್ರಮಾಣ 85.2 ಸೆಂ.ಮೀ. ನಷ್ಟಿರಲಿದೆ ಎಂದು ತಿಳಿದುಬಂದಿದೆ. ಹೀಗಾಗಿ ಈ ಬಾರಿ ಸುದೀರ್ಘ ಅವಧಿಯ ಮಳೆಯಾಗಲಿದೆ.

ಈಗಾಗಲೇ ಕೆಲವು ಜಿಲ್ಲೆಗಳಲ್ಲಿ ಬೇಸಿಗೆ ಮಳೆಯಾಗಿದೆ. ದಕ್ಷಿಣ ಕನ್ನಡ, ಉತ್ತರ ಕರ್ನಾಟಕದ ಕೆಲವೆಡೆ ವರುಣನ ಆಗಮನವಾಗಿತ್ತು. ಹಾಗಿದ್ದರೂ ಬೇಸಿಗೆಯ ದಗೆ ಕಡಿಮೆಯಾಗಿಲ್ಲ. ಏಪ್ರಿಲ್ 18 ರ ನಂತರ ಮತ್ತೆ ಕೆಲವು ಜಿಲ್ಲೆಗಳಲ್ಲಿ ಮಳೆಯಾಗುವ ಮುನ್ಸೂಚನೆ ಸಿಕ್ಕಿದೆ.

ವಿಶೇಷವೆಂದರೆ ಈ ಪಟ್ಟಿಯಲ್ಲಿ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ ಕೂಡಾ ಸೇರಿದೆ. ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಕೊಂಚ ಮೋಡ ಕವಿದ ವಾತಾವರಣದಂತಿತ್ತು. ಇದೀಗ ಮಳೆಯಾಗುವ ಸೂಚನೆ ಸಿಕ್ಕಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Karnataka Weather: ಕರ್ನಾಟಕದ ಈ ಜಿಲ್ಲೆಗಳಲ್ಲಿ ಇಂದು ಭಾರೀ ಮಳೆ

ಮೊಮ್ಮಗ ಕೇಳೋದು ಹೆಚ್ಚೋ ತಾತ ಮಾಡಿಕೊಡೋದು ಹೆಚ್ಚಾ: ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಏನು ಮಾಡಿದ್ರು ನೋಡಿ Video

ನಾನು ತಂದೆಯವರನ್ನು ನೋಡಲು ಹೋದ್ರೂ ಮೀಡಿಯಾದವ್ರು ಸುದ್ದಿ ಮಾಡ್ತಾರೆ, ಯಾಕೆ ಹೋಗಬಾರದಾ: ಪ್ರಿಯಾಂಕ್ ಖರ್ಗೆ Video

ಬುದ್ಧಿವಂತರ ಜಿಲ್ಲೆಯಲ್ಲಿ ಇದೆಂಥಾ ಘಟನೆ, ಒಬ್ಬಂಟಿ ಯುವತಿಯನ್ನು ಕಂಡು ಯುವಕರ ಗುಂಪು ಏನ್ ಮಾಡಿತು ನೋಡಿ, Video

ಎಸ್‍ಐಆರ್: ಸಾಮೂಹಿಕ ಫಾರ್ಮ್ ಭರ್ತಿ ವಿರುದ್ಧ ಡಾ.ರಾಧಾಮೋಹನ್ ದಾಸ್ ಅಗ್ರವಾಲ್ ಆಕ್ಷೇಪ

ಮುಂದಿನ ಸುದ್ದಿ
Show comments