Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮನ: ವಿದ್ಯಾರ್ಥಿಗಳ ಜತೆ ಸಂವಾದ

ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮನ: ವಿದ್ಯಾರ್ಥಿಗಳ ಜತೆ ಸಂವಾದ
ಬೆಂಗಳೂರು , ಬುಧವಾರ, 25 ನವೆಂಬರ್ 2015 (13:15 IST)
ಕಾಂಗ್ರೆಸ್ ಉಪಾಧ್ಯಕ್ಷ  ರಾಹುಲ್ ಗಾಂಧಿ ಅವರು ಬೆಂಗಳೂರು ಭೇಟಿ ಸಲುವಾಗಿ ವಿಮಾನನಿಲ್ದಾಣಕ್ಕೆ ಆಗಮಿಸಿದಾಗ ಅವರನ್ನು  ಸಿಎಂ ಸಿದ್ದರಾಮಯ್ಯ, ಮೋಟಮ್ಮ, ಜಾರ್ಜ್, ವೀರಪ್ಪ ಮೊಯ್ಲಿ ಮುಂತಾದ ಗಣ್ಯರು ಅದ್ಧೂರಿ ಸ್ವಾಗತ ನೀಡಿದರು.  ವಿದ್ಯಾರ್ಥಿಗಳ ಜತೆ ಸಂವಾದ ಕಾರ್ಯಕ್ರಮಕ್ಕಾಗಿ ರಾಹುಲ್ ಗಾಂಧಿ ಬೆಂಗಳೂರಿಗೆ ಆಗಮಿಸಿದ್ದಾರೆ.  

ಗಾಂಧಿ ಅವರು ಮೌಂಟ್ ಕಾರ್ಮೆಲ್ ಕಾಲೇಜಿಗೆ ಭೇಟಿ ನೀಡಿ,  ಮಧ್ಯಾಹ್ನ 1ಗಂಟೆಯಿಂದ 3ರವರೆಗೆ ಯುವಜನರನ್ನು ರಾಜಕೀಯಕ್ಕೆ ಸೆಳೆಯುವುದಕ್ಕಾಗಿ ಸಂವಾದ ನಡೆಸಿದ ಬಳಿಕ ದೆಹಲಿಗೆ ತೆರಳಿದ್ದಾರೆ.  ವಿಮಾನನಿಲ್ದಾಣದಿಂದ ನೇರವಾಗಿ  ಕುಮಾರಕೃಪಾ ಅತಿಥಿ ಗೃಹಕ್ಕೆ ರಾಹುಲ್ ಗಾಂಧಿ ಆಗಮಿಸಿದರು.

ರಾಹುಲ್ ಗಾಂಧಿ ಕಳೆದ ಅಕ್ಟೋಬರ್ ತಿಂಗಳಲ್ಲಿ ಮಂಡ್ಯ ಹಾಗೂ ಹಾವೇರಿಗೆ ಭೇಟಿ ನೀಡಿ ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದರು. ಹಾವೇರಿಯಲ್ಲಿ ರೈತರ ಸಮಾವೇಶ ಉದ್ದೇಶಿಸಿ ಮಾತನಾಡಿದ್ದರು.  ರಾಹುಲ್ ಗಾಂಧಿ ಭೇಟಿ ಮಾಡಿದ ಮೇಲೆ ರಾಜ್ಯಸರ್ಕಾರ ಆತ್ಮಹತ್ಯೆ ಮಾಡಿಕೊಂಡ ರೈತರಿಗೆ ಪರಿಹಾರ ಧನ ಘೋಷಿಸಿತು. 

Share this Story:

Follow Webdunia kannada