Webdunia - Bharat's app for daily news and videos

Install App

ರಾಘವೇಶ್ವರ್ ಭಾರತಿ ಶ್ರೀಗಳ ಗೋಕಿಂಕರ ಯಾತ್ರೆ ಆರಂಭ

Webdunia
ಶುಕ್ರವಾರ, 16 ಸೆಪ್ಟಂಬರ್ 2016 (20:09 IST)
ಗೋವಿನ ಕುರಿತಾದ ಭಾವಜಾಗರಣೆಯ ಮಹಾಭಿಯನ, ‘ಗೋಕಿಂಕರ ಯಾತ್ರೆ’ 5 ಸ್ಥಳಗಳಿಂದ ಶುಭಾರಂಭಗೊಂಡಿತು.  ಬೆಂಗಳೂರಿನ ಶ್ರೀರಾಮಚಂದ್ರಾಪುರಮಠದ ಶಾಖಾಮಠದಲ್ಲಿ ಬೆಳಗ್ಗೆ ಶ್ರೀಶ್ರೀರಾಘವೇಶ್ವರ ಭಾರತೀ ಸ್ವಾಮಿಗಳು ಗೋಪೂಜೆ ನೆರವೇರಿಸಿ, ಗೋಧ್ವಜಾರೋಹಣದೊಂದಿಗೆ ಗೋಕಿಂಕರ ಯಾತ್ರೆಗೆ ಚಾಲನೆ ನೀಡಿದರು. 
 
ಗಂವ್ಹಾರದ ತ್ರಿವಿಕ್ರಮಾನಂದ ಸರಸ್ವತಿ ಮಠದ ಶ್ರೀ ಸೋಪಾನನಾಥ ಸ್ವಾಮಿಗಳು, ಪೂಜ್ಯ ಪಾಂಡುರಂಗ ಜೋಷಿಗಳು, ಗೋಕಿಂಕರ ಯಾತ್ರೆಯ ಪದಾಧಿಕಾರಿಗಳು ಹಾಗೂ ಗೋಕಿಂಕರರು ಉಪಸ್ಥಿತರಿದ್ದರು.   
 
ಆಂಧ್ರದ ಮಂತ್ರಾಲಯದಿಂದ ಆರಂಭವಾದ ಯಾತ್ರೆಗೆ ಮಂತ್ರಾಲಯದ ಶ್ರೀಸುಭುದೇಂದ್ರತೀರ್ಥ ಶ್ರೀಪಾದರು ಪೂಜೆ ಸಲ್ಲಿಸಿ ಚಾಲನೆ ನೀಡಿದರು. ಮಹಾರಾಷ್ಟ್ರದ ಪಂಡರಾಪುರದಿಂದ ಹೊರಟ ರಥಕ್ಕೆ ಅಕ್ಕಲಕೋಟೆಯ ಶ್ರೀಗಳು ಸ್ವಾಗತಿಸಿದರು , ಗೋವಾದ ರಾಮನಾಥಿಯಿಂದ ಹೊರಟ ರಥಕ್ಕೆ ಸನಾತನ ಸಂಸ್ಥೆಯ ಚೈತನ್ಯ ಪ್ರಜಾಪತಿಗಳು, ಹಾಗೂ ಕೇರಳದ ಮಧೂರುಗಳಿಂದ ಹೊರಟ ಗೋಯಾತ್ರೆಗೆ ಸಿದ್ದಿವಿನಾಯಕ ದೇವಾಲಯದಲ್ಲಿ ರವೀಶ್ ತಂತ್ರಿಗಳು ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
 
 ಗೋಕಿಂಕರರಥ ಚಲಿಸುವ ಪ್ರದೇಶದಲ್ಲಿ ಗೋವಿನ ಕುರಿತಾಗಿ ಜಾಗೃತಿಯನ್ನು ಮೂಡಿಸಲಿದ್ದು, ಗೋಸಂರಕ್ಷಣೆಯ ಪ್ರತಿಜ್ಞೆಯನ್ನು ಕೈಗೊಳ್ಳಲಾಯಿತು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments