ಐದು ಮದುವೆಯಾಗಿ ಪತ್ನಿಯರಿಗೆ ವಂಚಿಸಿದ ಪಿಎಸ್ ಐ

Webdunia
ಸೋಮವಾರ, 6 ಆಗಸ್ಟ್ 2018 (15:41 IST)
ನಿವೃತ್ತ ಪಿಎಸ್.ಐ ಓರ್ವ ನಿಗೂಢವಾಗಿ ಒಂದಲ್ಲಾ, ಎರಡಲ್ಲಾ ಬರೋಬ್ಬರಿ ಐದು ಮದುವೆಯಾಗಿ ಪತ್ನಿಯರಿಗೆಲ್ಲಾ ವಂಚಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ತುಮಕೂರಿನಲ್ಲಿ ನಿವೃತ್ತ ಪಿಎಸ್.ಐ ಓರ್ವ ನಿಗೂಢವಾಗಿ ಒಂದಲ್ಲಾ, ಎರಡಲ್ಲಾ ಬರೋಬ್ಬರಿ ಐದು ಮದುವೆಯಾಗಿ ಪತ್ನಿಯರಿಗೆಲ್ಲಾ ವಂಚಿಸಿದ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಆ ನಿವೃತ್ತ ಪಿಎಸ್.ಐ  ಸಾವನಪ್ಪಿದ್ದಾಗ ಆಸ್ತಿಗಾಗಿ ಪತ್ನಿಯರು ಪೊಲೀಸ್ ಠಾಣೆ ಮೆಟ್ಟಿಲೇರಿದಾಗಲೇ ಗೊತ್ತಾಗಿದ್ದು ಪಂಚ ಪತ್ನಿಯರು ಇರೋ ವಿಚಾರ. ಇನ್ನೂ ವಿಶೇಷ ಅಂದ್ರೆ 58ನೇ ವಯಸ್ಸಿನಲ್ಲೂ 22 ವರ್ಷದ ಯುವತಿ ಚೇತನಾಳಿಗೆ ವರಿಸಿ ವಂಚಿಸಿದ್ದಾನಂತೆ ಈ ಚಪಲ ಚನ್ನಿಗರಾಯ.  ತುಮಕೂರು ತಾಲೂಕಿನ ಸ್ವಾಂದೇನಹಳ್ಳಿ ನಿವಾಸಿಯಾದ ಪಿಎಸೈ ದಿವಂಗತ ವಿಶ್ವನಾಥ್, ಬರೋಬ್ಬರಿ ಐದು ಮದುವೆಯಾಗಿದ್ದಾರಂತೆ. ಮೊದಲನೆಯವರು ಸರೋಜಮ್ಮ, ಎರಡನೇಯವರು ಶಾರದಾ  ಹಾಗೂ ಮೂರನೆಯವರು ಚೇತನಾ. ಇನ್ನುಳಿದ ಇಬ್ಬರು ಪತ್ನಿಯರು ಈ ಜಂಟಾಟವೇ ಬೇಡ ಎಂದು ದೂರ ಉಳಿದಿದ್ದಾರಂತೆ. ಅಂದಹಾಗೆ ಇದೇ ಜುಲೈ 18 ರಂದು ವಿಶ್ವನಾಥ್ ಸ್ವಾಂದೇನಹಳ್ಳಿಯ ತನ್ನ ಮನೆಯಲ್ಲಿ ಸಾವನಪ್ಪಿದ್ದಾರೆ.

ಈ ವೇಳೆ ಮೂರನೆ ಪತ್ನಿ ಎಂದುಕೊಳ್ಳುವ ಚೇತನಾ ಮಾತ್ರ ಇದ್ರು. ಸಾವಿನ ಸುದ್ದಿ ತಿಳಿಯುತಿದ್ದಂತೆ ಮೊದಲ ಪತ್ನಿಯ ಮಕ್ಕಳು,  ಎರಡನೇ ಪತ್ನಿ ಮತ್ತು ಮಕ್ಕಳು ಸ್ವಾಂದೇನಹಳ್ಳಿಗೆ ಧಾವಿಸಿ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದಾರೆ. ಆಗಲೇ ಗೊತ್ತಾಗಿದ್ದು ಪೊಲೀಸಪ್ಪನ ಐದು ಮದುವೆ ಸಂಗತಿ.  ಈಗ ಐವರಲ್ಲಿ ಮೂವರು ಪತ್ನಿಯರ ನಡುವೆ ಮಾತ್ರ ಆಸ್ತಿಗಾಗಿ ಗಲಾಟೆ ಜೋರಾಗಿದೆ. ಮೂವರು ಕೂಡಾ ಆಸ್ತಿಗಾಗಿ  ತುಮಕೂರು  ಗ್ರಾಮಾಂತರ ಠಾಣಾ ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾರೆ.  ಹೋದಲೆಲ್ಲಾ ಠಾಣೆಗೊಂದರಂತೆ  ಚಟಕ್ಕೆ ಮದುವೆಯಾದ ವಿಶ್ವನಾಥ್ ತನ್ನ ಪತ್ನಿಯರಿಗೆ ಸಂಕಷ್ಟದಲ್ಲಿ ಸಿಲುಕಿಸಿ ಇಹಲೋಕ ತ್ಯಜಿಸಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಇರಾನ್ ಗೆ ಯಾರೇ ನಾಯಕರಾಗಲಿ, ಕೊಲ್ಲೋದು ಖಚಿತ: ಡೊನಾಲ್ಡ್ ಟ್ರಂಪ್ ವಾರ್ನಿಂಗ್

Karnataka Weather: ಇಂದಿನ ಬಿಸಿಲಿನ ಝಳ ಹೆಚ್ಚಳ, ಹೊರಗೆ ಕಾಲಿಡುವ ಮುನ್ನ ಎಚ್ಚರಿಕೆ ಗಮನಿಸಿ

ಕಾಳಿಂಗ ಸರ್ಪವನ್ನು ಹಿಡಿಯಲು ಹೋದಾಗ ಉರಗ ತಜ್ಞನಿಗೇ ಏನು ಮಾಡ್ತು ನೋಡಿ: ಮೈ ನವಿರೇಳಿಸುವ ವಿಡಿಯೋ

ಮೀಸಲಾತಿ ಪರಿಗಣಿಸಿ, ಖಾಲಿ ಹುದ್ದೆ ಭರ್ತಿ ಮಾಡಿ: ರಾಜ್ಯ ಸರ್ಕಾರಕ್ಕೆ ಬಿವೈ ವಿಜಯೇಂದ್ರ ಒತ್ತಾಯ

ಓಮನ್‌ನಲ್ಲಿ ತೈಲ ಟ್ಯಾಂಕರ್‌ಗೆ ಇರಾನ್ ಕ್ಷಿಪಣಿ ಡಿಕ್ಕಿ ಬಳಿಕ ರಾಜಸ್ಥಾನದ ವ್ಯಕ್ತಿ ನಾಪತ್ತೆ

ಮುಂದಿನ ಸುದ್ದಿ
Show comments