Select Your Language

Notifications

webdunia
webdunia
webdunia
webdunia

ಟೋಲ್ ದರ ಏರಿಕೆ ವಿರುದ್ಧ ಸಾದನಹಳ್ಳಿ ಗೇಟ್ ಬಳಿ ತೀವ್ರ ಪ್ರತಿಭಟನೆ

ಟೋಲ್ ದರ ಏರಿಕೆ ವಿರುದ್ಧ ಸಾದನಹಳ್ಳಿ ಗೇಟ್ ಬಳಿ ತೀವ್ರ ಪ್ರತಿಭಟನೆ
ಬೆಂಘಳೂರು , ಮಂಗಳವಾರ, 6 ಮೇ 2014 (11:51 IST)
ದೇವನಹಳ್ಳಿ ಏರ್‌ಪೋರ್ಟ್ ರಸ್ತೆಯಲ್ಲಿ ಟೋಲ್ ದರ ಏರಿಸಿರುವ ಬಗ್ಗೆ ಆರ್. ಅಶೋಕ್ , ಬಚ್ಚೇಗೌಡ ನೇತೃತ್ವದಲ್ಲಿ ತೀವ್ರ ಪ್ರತಿಭಟನೆ ನಡೆಯುತ್ತಿದೆ. ಯಲಹಂಕ ಶಾಸಕ ವಿಶ್ವನಾಥ್ ಕೂಡ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದಾರೆ. ಕೂಡಲೇ ಟೋಲ್ ದರವನ್ನು ಇಳಿಸುವಂತೆ ಅವರು ಒತ್ತಾಯಿಸಿದ್ದಾರೆ.

ಬಿಜೆಪಿ, ಕರವೇ ಸಂಘಟನೆಗಳು ಟೋಲ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ದೇವನಹಳ್ಳಿ ತಾಲೂಕಿನ ಸಾದನಹಳ್ಳಿ ಗೇಟ್ ಬಳಿ ಈ ಪ್ರತಿಭಟನೆ ನಡೆದಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.  

ಏರ್‌ಪೋರ್ಟ್ ರಸ್ತೆಯಲ್ಲಿ ಟೋಲ್ ದರವನ್ನು ಏಕಾಏಕಿ ನಾಲ್ಕು ಪಟ್ಟು ಹೆಚ್ಚಿಸಿದ್ದರಿಂದ ಅನೇಕ ಮಂದಿ ಕ್ಯಾಬ್ ಚಾಲಕರು ಟೋಲ್ ಶುಲ್ಕ ಕೊಡುವುದಕ್ಕೆ ನಿರಾಕರಿಸಿದ್ದರಿಂದ ವಾಹನಗಳನ್ನು ವಶಪಡಿಸಿಕೊಳ್ಳಲು ಪೊಲೀಸರು ಆದೇಶ ನೀಡಿದ್ದರು. ಇದರಿಂದಾಗಿ ಕ್ಯಾಬ್ ಚಾಲಕರು ತೀವ್ರ ಪ್ರತಿರೋಧ ತೋರಿದ್ದರು. 

Share this Story:

Follow Webdunia kannada