Select Your Language

Notifications

webdunia
webdunia
webdunia
webdunia

ಪಟ್ಟದ ಕತ್ತಿಯಿರಿಸಿ ಖಾಸಗಿ ದರ್ಬಾರ್‌ಗೆ ಚಾಲನೆ

ಪಟ್ಟದ ಕತ್ತಿಯಿರಿಸಿ ಖಾಸಗಿ ದರ್ಬಾರ್‌ಗೆ ಚಾಲನೆ
ಮೈಸೂರು , ಗುರುವಾರ, 25 ಸೆಪ್ಟಂಬರ್ 2014 (17:33 IST)
ಮೈಸೂರು ಅರಮನೆಯಲ್ಲಿ ಚಿನ್ನದ ಪಟ್ಟದ ಕತ್ತಿಯನ್ನು ಸಿಂಹಾಸನದ ಮೇಲೆ  ಇರಿಸಿ ಖಾಸಗಿ ದರ್ಬಾರ್‌‍ಗೆ ಚಾಲನೆ ನೀಡಲಾಗಿದ್ದು, ಚಿನ್ನದ ಸಿಂಹಾಸನಕ್ಕೆ ಚದುರಂಗ ಕಾಂತರಾಜ್ ಅರಸ್ ಪೂಜೆ ಮಾಡಿದರು. ಚದುರಂಗ ಅವರು ಒಡೆಯರ್ ಸಹೋದರಿ ಗಾಯತ್ರಿದೇವಿ ಅವರ ಪುತ್ರರಾಗಿದ್ದಾರೆ.

ಶ್ರೀಕಂಠ ದತ್ತ ಒಡೆಯರ್ ನಿಧನ ಹಿನ್ನೆಲೆಯಲ್ಲಿ  ಪ್ರಮೋದಾ ದೇವಿ ಅವರ ಮಾರ್ಗದರ್ಶನದಲ್ಲಿ ಚಿನ್ನದ ಕತ್ತಿ ಇರಿಸಿ ಪೂಜೆ ಮಾಡಲಾಗುತ್ತಿದೆ.

ಅಂಬಾವಿಲಾಸ ಅರಮನೆಯಲ್ಲಿ ಖಾಸಗಿ ದರ್ಬಾರ್ 9 ದಿನಗಳ ಕಾಲ ನಡೆಯುತ್ತಿದ್ದು,  ಶ್ರೀಕಂಠ ದತ್ತ ಒಡೆಯರ್ ನಿಧನದ ಹಿನ್ನೆಲೆಯಲ್ಲಿ ಅರಮನೆಯಲ್ಲಿ ಸೂತಕದ ಛಾಯೆ ಆವರಿಸಿರುವುದರಿಂದ ಈ ಬಾರಿ ದಸರಾ ರಂಗು ಕಳೆದುಕೊಳ್ಳುವ ಲಕ್ಷಣಗಳು ಕಾಣಿಸಿವೆ. 

Share this Story:

Follow Webdunia kannada